Skip to main content

Posts

Showing posts from December, 2025

"ಪ್ಯಾರ್" ಒಂದೇ ಮಾತಲಿ.. ಹಾಡು ಹಿಟ್.. ಖುಷಿ ಹಂಚಿಕೊಂಡ ಚಿತ್ರತಂಡ...

"ಪ್ಯಾರ್" ಒಂದೇ ಮಾತಲಿ.. ಹಾಡು ಹಿಟ್..  ಖುಷಿ ಹಂಚಿಕೊಂಡ ಚಿತ್ರತಂಡ...    ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್. ಎಸ್. ನಾಗಶ್ರೀ ಅವರು ನಿರ್ಮಿಸಿರುವ ನೂತನ ಚಿತ್ರ ಪ್ಯಾರ್. ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನಾಯಕಿಯ ತಂದೆಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಿಶ್ವಿನ್, ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿದ್ದಾರೆ.     ಆ್ಯನ್ ಎಮೋಷನಲ್ ಜರ್ನಿ ಆಫ್ ಲವ್ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಈಗಾಗಲೇ ರಿಲೀಸಾಗಿ, ಸಂಗೀತ ಪ್ರಿಯರ ಮನ ಗೆದ್ದಿರುವ *'ಒಂದೇ ಮಾತಲಿ*ಹೇಳೋದಾದರೆ* ' ಎಂಬ ಹಾಡಿನ ಸುಂದರ ವೀಡಿಯೋ ಇನ್ *ಸ್ಟಾಗ್ರಾಂನಲ್ಲಿ 100* ಮಿಲಿಯನ್ ಗೂ ಹೆಚ್ಚು ವೀಕ್ಷಣೆಯಾಗಿದೆ. ಅಲ್ಲದೆ ಮಿಲಿಯನ್ ಪ್ಲಸ್ ವ್ಯೂಸ್ ಆಗಿದೆ. ಪಳನಿ ಡಿ.ಸೇನಾಪತಿ ಅವರ ಸಂಗೀತ, ಕೆಎಸ್.ಚಂದ್ರಶೇಖರ್ ಅವರ ಕ್ಯಾಮೆರಾದಲ್ಲಿ ಲಡಾಕ್ ನ ರಮಣೀಯ ಪರಿಸರದಲ್ಲಿ ಈ ಹಾಡನ್ನು ಸೆರೆ ಹಿಡಿಯಲಾಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಹಾಡಿನ ಯಶಸ್ಸಿನ ಖುಷಿಯನ್ನು ಚಿತ್ರತಂಡ ಮಾಧ್ಯದೊಂದಿಗೆ ಹಂಚಿಕೊಂಡಿತು.  ಮೊದಲಿಗೆ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಡಾ.ಬಿಎಸ್.ನಾಗರಾಜು ಮಾತನಾಡುತ್ತ ಲಡಾಕ್, ಕಾಶ್ಮೀರ, ಜೈಸಲ್ಮೇರ್ ನಲ...

ಅಖಾಡಕ್ಕೆ ಚಂದ್ರು ರೆಡಿ.."ಫಾದರ್" ಎಂಬ ಯೂತ್ಸ್ ಹಾರ್ಟ್‌ ಟಚಿಂಗ್‌ ಸಿನಿಮಾ..

ಅಖಾಡಕ್ಕೆ ಚಂದ್ರು ರೆಡಿ.. "ಫಾದರ್" ಎಂಬ ಯೂತ್ಸ್ ಹಾರ್ಟ್‌ ಟಚಿಂಗ್‌ ಸಿನಿಮಾ.. ನಿರ್ದೇಶಕ ಆರ್. ಚಂದ್ರು ಅವರ ಮೇಲಿನ ಪ್ರೀತಿಗೆ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರು ಆರ್.ಸಿ ಸ್ಟುಡಿಯೋಸ್ ಗೆ ಚಾಲನೆ ಕೊಟ್ಟು, "ಫಾದರ್‌" ಚಿತ್ರ ಅನಾವರಣ ಮಾಡಿಕೊಟ್ಟದ್ದು ಎಲ್ಲರಿಗೂ ಗೊತ್ತೇ ಇದೆ. ಆರ್‌ ಸಿ ಸ್ಟುಡಿಯೋಸ್‌ ನ 'ಫಾದರ್' ಚಿತ್ರ ಎಲ್ಲಾ ಕೆಲಸಗಳನ್ನು ಪೂರೈಸಿ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ಇತ್ತೀಚೆಗೆ ನಗರದ 5 ಸ್ಟಾರ್‌ ಹೋಟೆಲ್‌ ನಲ್ಲಿ 'ಫಾದರ್' ಸಿನಿಮಾದ ಥೀಮ್ ವಿಡಿಯೋ ಅದ್ಧೂರಿಯಾಗಿ ರಿಲೀಸ್ ಆಯಿತು. ಇದನ್ನು ಬಿಡುಗಡೆ ಮಾಡಿದ ಮುಖ್ಯ ಅತಿಥಿ, ಚಂದ್ರು ಅವರ 'ಫಾದರ್‌'. ಇದೊಂದು ಅಪರೂಪದ ಘಟನೆಯಾಯಿತು, ಎಲ್ಲರೂ ಸೂಪರ್‌ ಸ್ಟಾರ್‌ ಗಳನ್ನ ಕರೆದು ಬಿಡುಗಡೆ ಮಾಡಿಸುತ್ತಾರೆ, ಆದರೆ ಈ ಬಾರಿ ಆರ್‌ ಚಂದ್ರು, ಮುಖ್ಯ ಅತಿಥಿಯಾಗಿ ತನ್ನ ತಂದೆಯನ್ನೇ ಕರೆದು ಬಿಡುಗಡೆ ಮಾಡಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಪ್ಪ ಮಕ್ಕಳ ಬಾಂಧವ್ಯಕ್ಕೆ ಸಾಕ್ಷಿಯಾಗಿ, ಅಲ್ಲಿದ್ದವರೆಲ್ಲರ ಗಮನ ಸೆಳೆಯಿತು. ಅಲ್ಲಿ ಸೇರಿದ್ದವರೆಲ್ಲರಿಗೂ ಅವರವರ ತಂದೆ ನೆನಪಾದರು. ಆರ್.ಚಂದ್ರು ಆರ್‌ ಸಿ ಸ್ಟುಡಿಯೋಸ್‌ ಸಂಸ್ಥೆಯ ಮೂಲಕ ಪ್ರೇಕ್ಷಕರನ್ನು ಖುಷಿ ಪಡಿಸುವ ನಿಟ್ಟಿನಲ್ಲಿ, ಈ ಥೀಮ್‌ ವಿಡಿಯೋವನ್ನು ನೋಡಿದವರೆಲ್ಲರೂ ಚಪ್ಪಾಳೆ ತಟ್ಟಿ ...

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ "ಮಾಜರ್"..

ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ "ಮಾಜರ್"..  ಜನವರಿ 15 ಕ್ಕೆ ತೆರೆಗೆ ಬರಲಿದೆ ಡಾ||ಮುರುಗನಂದನ್ ನಿರ್ಮಾಣದ ಹಾಗೂ ಲೋಕಲ್ ಲೋಕಿ ನಿರ್ದೇಶನದ ಈ ಚಿತ್ರ..  ಸಂಗೀತ ಸಿನಿ ಹೌಸ್ ಲಾಂಛನದಲ್ಲಿ ಡಾ||ಮುರುಗನಂದನ್ ಎಮ್(ಪುಲಿಮುರುಗನ್) ಅವರು ನಿರ್ಮಿಸಿರುವ, ಲೋಕಲ್ ಲೋಕಿ ನಿರ್ದೇಶನದೊಂದಿಗೆ ಪ್ರಮುಖಪಾತ್ರದಲ್ಲೂ ನಟಿಸಿರುವ "ಮಾಜರ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.                 ದೇಶದಲ್ಲಿ ನಾನು ಕಂಡಿರುವ ನಿರ್ಭಯ ಹತ್ಯೆ ಮೊದಲಾದ ದುರಂತಗಳೆ ಈ ಕಥೆ ಬರೆಯಲು ಮುಖ್ಯ ಕಾರಣ. ಇಂತಹ ಕೃತ್ಯಗಳನ್ನು ಪ್ರತಿಯೊಬ್ಬರು ಖಂಡಿಸಬೇಕು. ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು ಎಂಬುದೆ "ಮಾಜರ್" ಚಿತ್ರದ ಮುಖ್ಯ ಉದ್ದೇಶ. ನಾನು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮುಖ್ಯಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಮುರುಗನಂದನ್ ಅವರು ನಿರ್ಮಾಣ ಮಾಡಿದ್ದಾರೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ, ರಾಜೇಶ್ ರಾಮನಾಥ್ ಹಿನ್ನಲೆ ಸಂಗೀತ ಹಾಗೂ ಗಗನ್ ಗೌಡ, ವಿನಯ್ ಗೌಡ, ಜಗನ್ ಬಾಬು ಅವರ ಛಾಯಾಗ್ರಹಣ "ಮಾಜರ್" ಚಿತ್ರಕ್ಕಿದೆ. ಶ್ರೀಹಾನ್, ದೀಪಕ್, ಉಗ್ರಂ ರವಿ, ಸಂಭ್ರಮಶ್ರೀ, ರಾಜು, ರಂಜನ್, ಅಜಯ್ ಶರ್ಮ ಮುಂತಾದವರು ಈ ಚಿತ್ರದಲ್ಲ...

ಹೆಮ್ಮೆಯ ಕನ್ನಡ ಸಂಘ ದುಬೈ, ಯು.ಎ.ಇ ವತಿಯಿಂದ ಜಿಮ್ ರವಿ ಅವರಿಗೆ "ವಿಶ್ವ ಶ್ರೇಷ್ಠ ಕ್ರೀಡಾ ಸಾಧಕ 2025" ಪ್ರಶಸ್ತಿ..

ಹೆಮ್ಮೆಯ ಕನ್ನಡ ಸಂಘ ದುಬೈ, ಯು.ಎ.ಇ ವತಿಯಿಂದ ಜಿಮ್ ರವಿ ಅವರಿಗೆ "ವಿಶ್ವ ಶ್ರೇಷ್ಠ ಕ್ರೀಡಾ ಸಾಧಕ 2025" ಪ್ರಶಸ್ತಿ.. ಸುಂದರ ಸಮಾರಂಭದಲ್ಲಿ ನಾಡಿನ ವಿವಿಧ ಕ್ಷೇತ್ರದ ಗಣ್ಯರು ಭಾಗಿ.. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿರುವುದ್ದಲ್ಲದೆ, 100 ಕ್ಕೂ ಹೆಚ್ಚಿನ ಬಂಗಾರದ ಪದಕಗಳನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಳಿಸಿರುವ, ಭಾರತದ ಪ್ರಮುಖ ಪ್ರಶಸ್ತಿಗಳಾದ ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ ಹಾಗೂ ಕರ್ನಾಟಕದ ಪ್ರಮುಖ ಪ್ರಶಸ್ತಿ ಕರ್ನಾಟಕ ಶ್ರೇಷ್ಠ, ಕರ್ನಾಟಕ ಶ್ರೀ ಸೇರಿದಂತೆ ಏಕಲವ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಜಿಮ್ ರವಿ ಅವರು ಭಾರತ ತಂಡದ ನಾಯಕ ಹಾಗೂ ಕೋಚ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿರುವ ಜಿಮ್ ರವಿ, ದಕ್ಷಿಣ ಭಾರತದ ಹೆಸರಾಂತ ನಟರೂ ಹೌದು. ಅಷ್ಟೇ ಅಲ್ಲದೇ ಅಮೇರಿಕಾ, ಆಸ್ಟ್ರೇಲಿಯಾ, ಇಟಲಿ, ಸ್ಪೇನ್, ಟರ್ಕಿ, ಜರ್ಮನಿ, ಜಪಾನ್, ಫಿಲಿಪೈನ್ಸ್, ಫ್ರಾನ್ಸ್ ಮುಂತಾದ ದೇಶಗಳಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವ ಜಿಮ್ ರವಿ ವಿದೇಶಗಳಲ್ಲೂ ಕೂಡ ಸಾಕಷ್ಟು ಪ್ರಶಸ್ತಿ ಪಡೆದು ಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ರವಿ ಜಿಮ್ ಅನ್ನು ನಡೆಸುತ್ತಿರುವ ಜಿಮ್ ರವಿ ...

ಪ್ರಭಾಸ್ -ಸಂಜಯ್ ದತ್ ನಡುವಿನ ಹೈ ವೋಲ್ಟೇಜ್ ಕಾದಾಟ; ಕುತೂಹಲ ಕೆರಳಿಸಿದ 'ದಿ ರಾಜಾಸಾಬ್' ಟ್ರೈಲರ್ 2.0..

ಪ್ರಭಾಸ್ -ಸಂಜಯ್ ದತ್ ನಡುವಿನ ಹೈ ವೋಲ್ಟೇಜ್ ಕಾದಾಟ; ಕುತೂಹಲ ಕೆರಳಿಸಿದ 'ದಿ ರಾಜಾಸಾಬ್' ಟ್ರೈಲರ್ 2.0.. https://youtu.be/mKjZHJnLTP4?si=hAQsnlfmL60BM9dF kannada rajasaab tralier ಜನವರಿ 9ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ ಪ್ಯಾನ್‌ ಇಂಡಿಯನ್‌ ಸಿನಿಮಾ.. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಹಾರರ್ ಫ್ಯಾಂಟಸಿ ಚಿತ್ರ 'ದಿ ರಾಜಾಸಾಬ್'ನ ಟ್ರೈಲರ್ 2.0 ಬಿಡುಗಡೆಯಾಗಿದ್ದು, ಚಿತ್ರದ ಕಥೆ ಮತ್ತು ಭಾವನಾತ್ಮಕ ಆಯಾಮಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ, ಸಂಮೋಹನ ವಿದ್ಯೆಯ ಮೂಲಕ ಭಯವನ್ನು ನಿಯಂತ್ರಿಸುವ ಶಕ್ತಿಯಾಗಿ ಸೂಪರ್‌ಸ್ಟಾರ್ ಸಂಜಯ್ ದತ್ ಅಬ್ಬರಿಸಿದ್ದಾರೆ.  ಚಿತ್ರದಲ್ಲಿ ಪ್ರಭಾಸ್ 'ರಾಜಾಸಾಬ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಜ್ಜಿ (ಜರೀನಾ ವಹಾಬ್) ಮೇಲೆ ಅಪಾರ ಪ್ರೀತಿ ಹೊಂದಿರುವ ವ್ಯಕ್ತಿಯಾಗಿ ನಟಿಸಿದ್ದಾರೆ. ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದ ನಾಯಕ, ಅಂತಿಮವಾಗಿ ಪಾಳುಬಿದ್ದ ಬಂಗಲೆ ತಲುಪುತ್ತಾನೆ. ಆ ಬಂಗಲೆಯೇ ದಿ ರಾಜಸಾಬ್‌ ಸಿನಿಮಾದ ಕರಾಳ ರಹಸ್ಯಗಳ ತಾಣ. ಅಲ್ಲಿ ಸಂಮೋಹನ ವಿದ್ಯೆಯ ಮೂಲಕ ಮನಸ್ಸನ್ನೇ ಸೆರೆಹಿಡಿಯುವ ವಿಲನ್ ಸಂಜಯ್ ದತ್ ಎದುರಾಗುತ್ತಾರೆ. ದೈಹಿಕ ಬಲಕ್ಕಿಂತ ಹೆಚ್ಚಾಗಿ ಮಾನಸಿಕ ಆಟಗಳ ಮೂಲಕ ಪ್ರಭಾಸ್ ಅವರನ್ನು ಕಟ್ಟಿಹಾಕುವ ವಿಭಿನ್ನ ಪಾತ್ರದಲ್ಲಿ ಸಂಜಯ್ ದ...

ಮಾಸ್ತಿಯಲ್ಲಿ ಬಿಡುಗಡೆಯಾಯಿತು "ಆಲ್ಫಾ #men love vengeance" ಚಿತ್ರದ ಮೊದಲ ಹಾಡು...

ಮಾಸ್ತಿಯಲ್ಲಿ ಬಿಡುಗಡೆಯಾಯಿತು "ಆಲ್ಫಾ #men love vengeance" ಚಿತ್ರದ ಮೊದಲ ಹಾಡು...   L A ಪ್ರೊಡಕ್ಷನ್ಸ್ ನಿರ್ಮಾಣದ, ವಿಜಯ್ ನಿರ್ದೇಶನದ ಹಾಗೂ ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರ ಫೆಬ್ರವರಿ 20 ರಂದು ಬಿಡುಗಡೆ..  L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದಕುಮಾರ್ ಅವರು ನಿರ್ಮಾಣ ಮಾಡಿರುವ, ವಿಜಯ್ ನಿರ್ದೇಶನದ ಹಾಗೂ ಯುವಪ್ರತಿಭೆ ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ "ಆಲ್ಫಾ #men love vengeance" ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡು ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಊರು ಮಾಸ್ತಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕಾಗಿ ನಾಗಾರ್ಜುನ ಶರ್ಮ ಅವರು ಬರೆದಿರುವ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಹಾಗೂ ಅನರಾಗ್ ಕುಲಕರ್ಣಿ ಅವರು ಹಾಡಿರುವ "ರಾವಾ ರಾವಾ" ಎಂಬ ಹಾಡು ಮಾಸ್ತಿಯಲ್ಲಿ ನಡೆದ 70 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಬಿಡುಗಡೆಯಾಗಿದ್ದು, ಶಾಸಕರಾದ ನಂಜೇಗೌಡ ಅವರು ಈ ಹಾಡನ್ನು ಅನಾವರಣ ಮಾಡಿದ್ದಾರೆ. ಈ ಅದ್ದೂರಿ ಸಮಾರಂಭದಲ್ಲಿ ನಿರ್ದೇಶಕ ವಿಜಯ್, ನಾಯಕ ಹೇಮಂತ್ ಕುಮಾರ್, ಸಂಭಾಷಣೆಕಾರ ಮಾಸ್ತಿ ಹಾಗೂ ನಾಯಕಿಯರಾದ ಗೋಪಿಕ ಸುರೇಶ್, ಆಯನಾ ಉಪಸ್ಥಿತರಿದ್ದರು. ಲಹರಿ ಮ್ಯೂಸಿಕ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಧ...

ಮಲೇಷ್ಯಾದಲ್ಲಿ ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್: ದಾಖಲೆ ಬರೆದ ದಳಪತಿ ವಿಜಯ್ ಅಭಿಮಾನಿಗಳ ಸಾಗರ..

ಮಲೇಷ್ಯಾದಲ್ಲಿ ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್: ದಾಖಲೆ ಬರೆದ ದಳಪತಿ ವಿಜಯ್ ಅಭಿಮಾನಿಗಳ ಸಾಗರ.. ಮಲೇಷ್ಯಾದಲ್ಲಿ ನಿನ್ನೆ (ಡಿಸೆಂಬರ್‌ ೨೭) ನಡೆದ ‘ಜನನಾಯಕನ್’ ಚಿತ್ರದ ಭವ್ಯ ಆಡಿಯೋ ಬಿಡುಗಡೆ ಸಮಾರಂಭವು ಕೇವಲ ಸಿನಿಮಾ ಸಂಭ್ರಮವಾಗಿ ಉಳಿಯದೆ, ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಅದ್ಭುತ ಕಾರ್ಯಕ್ರಮವು ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ 'ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದೆ. ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು.. ಕಾರ್ಯಕ್ರಮದ ಆರಂಭದಲ್ಲಿ ದಳಪತಿ ವಿಜಯ್ ಅವರ ತಾಯಿ ನೀಡಿದ ವಿಶೇಷ ಪ್ರದರ್ಶನವು ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು. ವಿಜಯ್ ಅವರು ವೇದಿಕೆಯ ಮೇಲೆ ಓಡಿಹೋಗಿ ತಮ್ಮ ತಂದೆಯನ್ನು ಆಲಂಗಿಸಿಕೊಂಡ ಕ್ಷಣವು ಇಡೀ ಕ್ರೀಡಾಂಗಣದಲ್ಲಿ ಚಪ್ಪಾಳೆ ಮತ್ತು ಹರ್ಷೋದ್ಗಾರಗಳನ್ನು ಮೊಳಗಿಸಿತು. ನಿರ್ದೇಶಕ ಹೆಚ್. ವಿನೋತ್ ಮಾತನಾಡಿ, ಇದು ನೂರಕ್ಕೆ ನೂರರಷ್ಟು ದಳಪತಿ ವಿಜಯ್ ಅವರ ಸಿನಿಮಾ ಹಾಗೂ ಅವರ ಸಿದ್ಧಾಂತ ಮತ್ತು ಅಭಿಮಾನಿಗಳೊಂದಿಗಿನ ಬಾಂಧವ್ಯದ ಆಚರಣೆಯಾಗಿದೆ ಎಂದು ಖಚಿತಪಡಿಸಿದರು. ನಿರ್ದೇಶಕ ಅಟ್ಲಿ ಅವರು ವಿಜಯ್ ಅವರ ಬೆಂಬಲವನ್ನು ಶ್ಲಾಘಿಸಿ ಭಾವುಕ ಭಾಷಣ ಮಾಡಿದರು. ನಿರ್ದೇಶಕರಾದ ಲೋಕೇಶ್ ಕನಕರಾಜ್ ವಿಜಯ್ ಅವರ ಮೇಲಿರುವ ಅಭಿಮಾನದ ಬಗ್ಗೆ ಮಾತನಾಡ...

ಸಂಕ್ರಾಂತಿ ಹಬ್ಬಕ್ಕೆ 'ದಿ ರಾಜಾ ಸಾಬ್' ಅಬ್ಬರ – ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಪ್ರಭಾಸ್..

ಸಂಕ್ರಾಂತಿ ಹಬ್ಬಕ್ಕೆ 'ದಿ ರಾಜಾ ಸಾಬ್' ಅಬ್ಬರ – ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಪ್ರಭಾಸ್.. ಹೈದರಾಬಾದ್: ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್' ತಂಡದಿಂದ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಗಿದೆ. ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದ ಪ್ರೀ-ರಿಲೀಸ್ ಸಮಾರಂಭದಲ್ಲಿ ಚಿತ್ರತಂಡವು ಅಭಿಮಾನಿಗಳ ಸಮ್ಮುಖದಲ್ಲಿ ಸಿನಿಮಾ ಬಗ್ಗೆ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ರೆಬೆಲ್ ಸ್ಟಾರ್ ಪ್ರಭಾಸ್ ಮಾತನಾಡಿ, "ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ನೀಡುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ. ನಿರ್ದೇಶಕ ಮಾರುತಿ ಅವರ ಬರವಣಿಗೆಗೆ ನಾನು ಕ್ಲೈಮ್ಯಾಕ್ಸ್ ನೋಡಿದ ನಂತರ ಅಭಿಮಾನಿಯಾದೆ. ಈ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ, ಅದರ ಜೊತೆಗೆ 'ದಿ ರಾಜಾ ಸಾಬ್' ಕೂಡ ಬ್ಲಾಕ್‌ಬಸ್ಟರ್ ಆಗಲಿ" ಎಂದು ಆಶಿಸಿದರು. ಅಲ್ಲದೆ, ನಾಳೆ (ಡಿಸೆಂಬರ್ 29) ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದರು. ಮಾರುತಿ ಬರವಣಿಗೆಗೆ ಪ್ರಭಾಸ್ ಮನಸೋತ ಕ್ಷಣ.. "ಮಾರುತಿ ಅವರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಅದನ್ನು ಅವರು ಪ...

ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ "LSD"...

ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ "LSD"...  ಯುವಪ್ರತಿಭೆ ಶಕ್ತಿಪ್ರಸಾದ್ ನಿರ್ದೇಶನದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್ ನಟನೆ... ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಹಾಗೂ ಶಕ್ತಿಪ್ರಸಾದ್ ನಿರ್ದೇಶನದಲ್ಲಿ ಚೈತ್ರಾ ಜೆ ಆಚಾರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ "LSD"(ಲೈಲಾಸ್ ಸ್ವೀಟ್ ಡ್ರೀಮ್) ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೈಟಲ್ ಟೀಸರ್ ಬಹಳ ಕುತೂಹಲ ಮೂಡಿಸಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. "LSD", ನಮ್ಮ ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ. "ನಿದ್ರಾದೇವಿ ನೆಕ್ಸ್ಟ್ ಡೋರ್" ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ. ನಂತರ ಶ್ರೀಮುರಳಿ ಅಭಿನಯದ "ಉಗ್ರಾಯಧಮ್" ಹಾಗೂ "ನೀ ನಂಗೆ ಅಲ್ವಾ" ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೊಸಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಹಾಗಾಗಿ ಯುವ ಪ್ರತಿಭೆ ಶಕ್ತಿಪ್ರಸಾದ್ ಅವರು ಬಂದು "LSD" ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಚೈತ್ರಾ ಜೆ ಆಚಾರ್, ಎಂ.ಡಿ.ಪಲ್ಲವಿ, ಅವಿನಾಶ್ ಮುಂತಾದವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ‌. ನಮ್ಮ ಚಿತ್ರಕ...

ಉತ್ತರ ಕರ್ನಾಟಕ ಸೊಗಡಿನ"ಸೂರ್ಯ" ಟ್ರೈಲರ್ ಬಿಡುಗಡೆ..

ಉತ್ತರ ಕರ್ನಾಟಕ ಸೊಗಡಿನ "ಸೂರ್ಯ" ಟ್ರೈಲರ್ ಬಿಡುಗಡೆ..     ಉತ್ತರ ಕರ್ನಾಟಕ ಭಾಗದ ಸಾಕಷ್ಟು ನಿರ್ಮಾಪಕ, ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೇರೀತಿ ಇದೀಗ ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರೂ ತಮ್ಮ ಕೊಡುಗೆ ನೀಡಲು ಅಣಿಯಾಗಿದ್ದಾರೆ.‌ ನಂದಿ ಸಿನಿಮಾಸ್ ಅಡಿಯಲ್ಲಿ ಅವರು "ಸೂರ್ಯ" ಎಂಬ ಮಾಸ್ ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ನಿರ್ಮಿಸಿದ್ದು, ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಜನವರಿ 15 ರಂದು ತೆರೆಗೆ ತರಲಿದ್ದಾರೆ.      ಸ್ಲಂನಲ್ಲಿ ಬೆಳೆದ ಯುವಕನೊಬ್ಬ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಹೋರಾಟ, ಸಾಹಸ ಮಾಡುತ್ತಾನೆ, ಆತನಿಗೆ ಯಾರೆಲ್ಲ ಸಹಾಯ ಮಾಡುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ ಸಾಗರ್ ದಾಸ್ ಅವರು ಹೇಳಹೊರಟಿದ್ದಾರೆ. ಯುವನಟ ಪ್ರಶಾಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.    ವೇದಿಕೆಯಲ್ಲಿ ನಿರ್ಮಾಪಕ ಬಸವರಾಜ ಬೆಣ್ಣಿ ಮಾತನಾಡುತ್ತ ಟ್ರೈಲರ್ ಚೆನ್ನಾಗಿ ಮೂಡಿಬಂದಿದೆ. ಪೂನಾದಲ್ಲಿ ಉದ್ಯಮ ನಡೆಸುತ್ತಿರುವ ನಾವು, ಹುಟ್ಟಿಬೆಳೆದ ಕನ್ನಡ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂದು ಈ ಚಿತ್ರ ಮಾಡಿದ್ದೇವೆ ಎಂದರೆ, ಅವರ ಸಹೋದರ ರವಿ ಬೆಣ್ಣಿ ಮಾತನಾಡಿ ಜನವರಿ 15 ಕ್ಕೆ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಸಾಗರ್ ಕಥೆ ಹೇಳಿದಾಗ ...

'ವೃಷಭ' ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್..

'ವೃಷಭ' ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್.. ಡಿಸೆಂಬರ್ 25 ರಂದು ಬಿಡುಗಡೆಯಾದ 'ವೃಷಭ' ಸಿನಿಮಾ ಭಾರಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಒಂದು ಪ್ರಮುಖ ಅಂಶವೆಂದರೆ ಅದು ಸಮರ್ಜಿತ್ ಲಂಕೇಶ್ ಅವರ ಅಭಿನಯ. ತಮ್ಮ ಗಂಭೀರವಾದ ನಟನಾ ಶೈಲಿ ಮತ್ತು ಕಲಾಬದ್ಧ ಅಭಿನಯದ ಮೂಲಕ ಸಮರ್ಜಿತ್ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಮರ್ಜಿತ್ ಅವರ ನಟನೆಯ ಪ್ರಮುಖ ಆಕರ್ಷಣೆ ಎಂದರೆ ಚಿತ್ರದ ರೋಚಕ ಸಾಹಸ ದೃಶ್ಯಗಳು. ಅದ್ಭುತವಾದ ದೈಹಿಕ ಶ್ರಮ ಮತ್ತು ಬದ್ಧತೆಯೊಂದಿಗೆ ಅವರು ಈ ಹೋರಾಟದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಾಹಸ ದೃಶ್ಯಗಳಲ್ಲಿನ ನೈಜ ಶಕ್ತಿ ಮತ್ತು ಪ್ರಭಾವವು ಚಿತ್ರದ ತೂಕವನ್ನು ಹೆಚ್ಚಿಸಿದೆ ಎಂದು ವ್ಯಾಪಕವಾಗಿ ಶ್ಲಾಘಿಸಲಾಗುತ್ತಿದೆ. ಡಿಜಿಟಲ್ ವೇದಿಕೆಯಲ್ಲೂ ಸಂಚಲನ ಸಮರ್ಜಿತ್ ಅವರಿಗೆ ಸಿಗುತ್ತಿರುವ ಮೆಚ್ಚುಗೆ ಕೇವಲ ಚಿತ್ರಮಂದಿರಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಅಂತರ್ಜಾಲದ ಲೋಕದಲ್ಲೂ ಹರಿದುಬರುತ್ತಿದೆ. • ಎಕ್ಸ್ (ಟ್ವಿಟರ್) ಸಂಚಲನ: ಸಮರ್ಜಿತ್ ಲಂಕೇಶ್ ಅವರ ಹೆಸರು ಎಕ್ಸ್‌ನಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. • ಪ್ರೇಕ್ಷಕರ ಪ್ರತಿಕ್ರಿಯೆ: ಅಭಿಮಾನಿಗಳು ಮತ್ತು ಸಿನಿಪ್ರಿಯರು ಅವರ ಅಭಿನಯದ ತುಣುಕುಗಳು ಹಾಗೂ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್...

ಬಾಕಿ ಉಳಿದಿರುವ ಸಹಾಯಧನ(ಸಬ್ಸಿಡಿ) ಹಾಗೂ ಚಲನಚಿತ್ರ ಪ್ರಶಸ್ತಿಗಳನ್ನು ನೀಡುವಂತೆ ಮನವಿ..

ಬಾಕಿ ಉಳಿದಿರುವ ಸಹಾಯಧನ(ಸಬ್ಸಿಡಿ) ಹಾಗೂ ಚಲನಚಿತ್ರ ಪ್ರಶಸ್ತಿಗಳನ್ನು ನೀಡುವಂತೆ ಮನವಿ.. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತಾದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಹಿರಿಯ ನಟಿ ಹಾಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಡಾ||ಜಯಮಾಲ ಅವರು ಬಾಕಿ ಉಳಿದಿರುವ ಸಹಾಯಧನ(ಸಬ್ಸಿಡಿ) ಹಾಗೂ ಚಲನಚಿತ್ರ ಪ್ರಶಸ್ತಿಗಳನ್ನು ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧುಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಡಿ.ಕೆ.ರಾಮಕೃಷ್ಣ (ಪ್ರವೀಣ್ ಕುಮಾರ್) ಮುಂತಾದವರು ಉಪಸ್ಥಿತರಿದ್ದರು. ಜಯಮಾಲಾ ಅವರ ಮನವಿಗೆ ಸ್ಪಂದಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಈ ಎರಡು ಕೆಲಸಗಳನ್ನು ಕೂಡಲೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.