Skip to main content

Posts

Showing posts from December, 2025

ನಾಳೆಯಿಂದ‌ ಸೈಕಲಾಜಿಕಲ್ ಥ್ರಿಲ್ಲರ್ 'ಗ್ರೀನ್' ಸಿನಿಮಾ zee5 ಒಟಿಟಿಯಲ್ಲಿ ಪ್ರಸಾರ...

ನಾಳೆಯಿಂದ‌ ಸೈಕಲಾಜಿಕಲ್ ಥ್ರಿಲ್ಲರ್ 'ಗ್ರೀನ್' ಸಿನಿಮಾ zee5 ಒಟಿಟಿಯಲ್ಲಿ ಪ್ರಸಾರ... ಕಾಡುವ ಕಥೆ 'ಗ್ರೀನ್' ಸಿನಿಮಾ ನಾಳೆಯಿಂದ‌ zee5 ಒಟಿಟಿಯಲ್ಲಿ ಸ್ಟ್ರೀಮಿಂಗ್.. ಕನ್ನಡ‌ ಸೈಕಲಾಜಿಕಲ್ ಥ್ರಿಲ್ಲರ್ ಗ್ರೀನ್ ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ನಾಳೆಯಿಂದ zee5 ಒಟಿಟಿಯಲ್ಲಿ ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆ.  ರಾಜ್ ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಭಿನ್ನ ಕಥಾಹಂದರವಿದೆ. ಇದು ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಪ್ರೇಕ್ಷಕರ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ. ತನ್ನ ಇಡೀ ಬದುಕನ್ನೇ ನಿಯಂತಣ ಮಾಡುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಪ್ರಯತ್ನಿಸುವ ನಾಯಕನ ಕಥೆಯೇ ಗ್ರೀನ್. 'ಗ್ರೀನ್’ ಸಿನಿಮಾದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಡಿಂಪಿ ಫಾಧ್ಯಾ, ಆರ್ ಜೆ ವಿಕ್ಕಿ ಮತ್ತು ಶಿವ ಮಂಜು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕೆ. ಮಧುಸೂದನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಕ್ತಿ ಸ್ಯಾಕ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಗ್ರೀನ್ ಸಿನಿಮಾವನ್ನು ರಾಜ್ ವಿಜಯ್ ಹಾಗೂ ಬಿ.ಎನ್. ಸ್ವಾಮಿ ನಿರ್ಮಾಣ ಮಾಡಿದ್ದಾರೆ.

ಚಿತ್ರೀಕರಣ ಮುಗಿಸಿದ ‘ಮಹಾಕವಿ’..

ಚಿತ್ರೀಕರಣ ಮುಗಿಸಿದ ‘ಮಹಾಕವಿ’.. ಬೆಳಗಾವಿಯ ಶ್ರೀ ಪ್ರಭು ಯತ್ನಟ್ಟಿಯವರು ಪಿ.ಆರ್.ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿರುವ ಪ್ರೊ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ‘ಮಹಾಕವಿ’ ಕನ್ನಡ ಸಿನಿಮಾದ ಚಿತ್ರೀಕರಣವು ಮುಕ್ತಾಯಗೊಂಡಿದೆ. ಈಗ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ‘ಮಹಾಕವಿ’ಯು ಬರಗೂರರ ನಿರ್ದೇಶನದ ಇಪ್ಪತ್ತೈದನೇ ಚಿತ್ರ ಎನ್ನುವುದು ಒಂದು ವಿಶೇಷ. ‘ಮಹಾಕವಿ’ ಚಿತ್ರವು ಕನ್ನಡದ ಆದಿಕವಿಯೆಂದೇ ಪ್ರಸಿದ್ಧನಾದ ಪಂಪನ ಕಾವ್ಯಗಳನ್ನು ಆಧರಿಸಿದೆ. ಇದು ಪಂಪನ ಜೀವನ ಚರಿತ್ರೆಯಲ್ಲ. ಪಂಪನ ಪರಿಕಲ್ಪನೆಗಳ ದೃಶ್ಯರೂಪಕ. ಅಂದರೆ ಪಂಪ ಮಹಾಕವಿಯು ತನ್ನ ಕಾವ್ಯಗಳಲ್ಲಿ ಪ್ರತಿಪಾದಿಸಿದ ಪರಿಕಲ್ಪನೆಗಳಿಗೆ ಕಥನ ರೂಪ ಕೊಡಲಾಗಿದೆ. ಪಂಪ ಮಹಾಕವಿಯು ರಾಜನ ಆಸ್ಥಾನದಲ್ಲಿದ್ದೂ ಸೃಜನಶೀಲ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡು ಬರೆದ ಕವಿ. ಪ್ರಭುತ್ವ ಮತ್ತು ಸೃಜನಶೀಲ ಸ್ವಾತಂತ್ರ್ಯವನ್ನು ಕುರಿತ ಪಂಪನ ಪರಿಕಲ್ಪನೆಯು ಇಂದಿಗೂ ಪ್ರಸ್ತುತವಾಗಿದೆ. ಅಂತೆಯೇ ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊಟ್ಟಮೊದಲ ಕವಿ ಪಂಪ. ‘ಆದಿಪುರಾಣ’ದಲ್ಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಪ್ರತಿಪಾದಿಸಿದ ಪಂಪ, ‘ವಿಕ್ರಮಾರ್ಜುನ ವಿಜಯ’ದಲ್ಲಿ ಕರ್ಣನ ಪಾತ್ರದ ಮೂಲಕ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾನೆ. ‘ಆದಿಪುರಾಣ’ದಲ್ಲಿ ಅಧಿಕಾರದ ಅಹಂಕಾರಕ್ಕೆ ವಿರೋಧ ಒಡ್ಡಿ ಯುದ್ಧದ ಬದಲು ಶಾಂತಿ ...

"ಉಡಾಳ" ಚಿತ್ರಕ್ಕೆ 25 ದಿನಗಳ ಸಂಭ್ರಮ...

"ಉಡಾಳ" ಚಿತ್ರಕ್ಕೆ 25 ದಿನಗಳ ಸಂಭ್ರಮ... ಉತ್ತರ ಕರ್ನಾಟಕದ ಭಾರಿ ದೊಡ್ಡ ಪಿಚ್ಚರ್ ಎನ್ನುವ ಟ್ಯಾಗ್ ಲೈನ್ ಮೂಲಕ ಹೊರಬಂದ ಅಪ್ಪಟ ಉತ್ತರ ಕರ್ನಾಟಕದ ಉಡಾಳ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಹಿಂದೆ ಪದವಿ ಪೂರ್ವ ಚಿತ್ರವನ್ನು ನಿರ್ಮಿಸಿ ಯಶಸ್ಸು ಕಂಡಿದ್ದ ದಾವಣಗೆರೆ ಮೂಲದ ರವಿ ಶಾಮನೂರು ಮತ್ತು ಯೋಗರಾಜ್ ಭಟ್ ಉಡಾಳ ಚಿತ್ರವನ್ನು ನಿರ್ಮಿಸಿ ಮತ್ತೊಮ್ಮೆ ಯಶಸ್ವಿ ಕಂಡಿದ್ದಾರೆ,  ನಾಯಕನಾಗಿ ಪೃಥ್ವಿ ಶಾಮನೂರು ತಮ್ಮ ನಟನೆ ನೃತ್ಯ ಸಾಹಸ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದು ಚಿತ್ರರಂಗದ ಭರವಸೆಯ ನಾಯಕ ನಟನಾಗಿ ಹೊರಹೊಮ್ಮಿ ಜೊತೆಗೆ ಚಿತ್ರದ ಯಶಸ್ಸಿನಿಂದ ಮುಂದಿನ ಚಿತ್ರಗಳ ಕಥೆಗಳ ಆಯ್ಕೆಯಲ್ಲಿ ಬಿಜಿಯಾಗಿದ್ದಾರೆ. ಇನ್ನು ನಿರ್ದೇಶಕ ಅಮೋಲ್ ಪಾಟೀಲ್ ಅವರಿಗೆ ಮೊದಲನೇ ನಿರ್ದೇಶನದ ಚಿತ್ರವಾಗಿದ್ದು ಮೊದಲ ಚಿತ್ರದಲ್ಲೇ ಯಶಸ್ವಿ ಕಂಡು ತಮ್ಮ ಕೆಲಸಕ್ಕೆ ಚಿತ್ರರಂಗದಲ್ಲಿ ಉತ್ತಮ ಪ್ರಶಂಸೆ ಪಡೆದುಕೊಂಡು ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ಇನ್ನು ಬಹುಪಾಲು ಉತ್ತರ ಕರ್ನಾಟಕದ ಕಲಾವಿದರು ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದು ಇನ್ನೊಂದು ವಿಶೇಷ, ಅಮೋಲ್ ಪಾಟೀಲ್ ಮತ್ತು ವೀರೇಶ್ ಪಿಎಂ ಚಿತ್ರಕಥೆ ಸಂಭಾಷಣೆ ಬರೆದಿದ್ದು ಚಿತ್ರಕ್ಕೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸಿದ್ದಾರೆ, ಸಹ ಮತ್ತು ಪೋಷಕ ಕಲಾವಿದರ...

ಸುನಯನ "ಮೌನ ರಾಗ" ಕ್ಕೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಸಾಥ್..

ಸುನಯನ "ಮೌನ ರಾಗ" ಕ್ಕೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಸಾಥ್.. ಪತ್ರಕರ್ತೆ ಹಾಗೂ ವಿಮರ್ಶಕಿ ಸುನಯನ ಸುರೇಶ್ ಈಗ ನಿರ್ದೇಶಕಿಯಾಗಿದ್ದಾರೆ. ಇಪ್ಪತ್ತು ನಿಮಿಷಗಳ "ಮೌನ ರಾಗ" ಎಂಬ ಕಿರುಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಈ ಕಿರುಚಿತ್ರ ಪ್ರಶಸ್ತಿಯ ಜೊತೆಗೆ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇತ್ತೀಚೆಗೆ ಈ ಕಿರುಚಿತ್ರದ ವಿಶೇಷ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಿತು. ಅಶ್ವಿನಿ‌ ಪುನೀತ್ ರಾಜಕುಮಾರ್, ಪ್ರಿಯಾಂಕಾ ಉಪೇಂದ್ರ, ಕೆ.ಎಂ.ಚೈತನ್ಯ, ಪನ್ನಗಾಭರಣ, ಭಾವನಾ ರಾವ್, ಮೇಘನಾ ಗಾಂವ್ಕರ್, ಮಾನ್ವಿತ ಕಾಮತ್, ಪ್ರವೀಣ್ ತೇಜ್, ಶುಭ್ರ ಅಯ್ಯಪ್ಪ, ರಕ್ಷ್, ಪ್ರಭು ಮುಂಡ್ಕರ್, ದಿಶಾ ಮದನ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಸೆಲೆಬ್ರಿಟಿಗಳು "ಮೌನ ರಾಗ" ದ ವಿಶೇಷ ಪ್ರದರ್ಶನಕ್ಕೆ ಆಗಮಿಸಿ, ಸುನಯನ ಅವರ ಚೊಚ್ಚಲ ಪ್ರಯತ್ನಕ್ಕೆ ಮನಸ್ಸಾರೆ ಹಾರೈಸಿದರು. ನಂತರ ತಂಡದ ಸದಸ್ಯರು ಮಾತನಾಡಿದರು. ಕಿರುಚಿತ್ರದಲ್ಲಿ ನಟಿಸಿರುವ ನಟಿ ಶ್ರುತಿ ಹರಿಹರನ್ ಮಾತನಾಡಿ, ಸುನಯನ ಅವರು ನನಗೆ ಬಹಳ ವರ್ಷಗಳ ಪರಿಚಯ. ಈಗ ಅವರು ನಿರ್ದೇಶಕಿಯಾಗಿರುವುದು ಖುಷಿಯಾಗಿದೆ. ಹೆಣ್ಣು ಮಕ್ಕಳ ದಿನನಿತ್ಯದ ಬವಣೆಗಳನ್ನು ಸುನಯನ ಇಪ್ಪತ್ತು ನಿಮಿಷಗಳಲ್ಲಿ ಮನಮುಟ್ಟುವಂತೆ ತೋರಿಸಿದ್ದಾರೆ. ನಿರ್ದೇಶನದ ಬಗ್ಗೆ ಆಸಕ್ತ...

"ಕೊರಗಜ್ಜ" ಸಿನಿಮಾದ ಶ್ರೇಯ ಘೋಷಾಲ್ ಹಾಡಿನ ಸಾಹಿತ್ಯ ಬಿಡುಗಡೆ...!

"ಕೊರಗಜ್ಜ" ಸಿನಿಮಾದ ಶ್ರೇಯ ಘೋಷಾಲ್ ಹಾಡಿನ ಸಾಹಿತ್ಯ ಬಿಡುಗಡೆ...! ಎರಡನೆಯ ಹಾಡು ಬಿಡುಗಡೆಗೆ ಕ್ಷಣಗಣನೆ.. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ"ಕೊರಗಜ್ಜ" ಚಿತ್ರದ ಜೀ಼ ಮ್ಯೂಸಿಕ್ ಬಿಡುಗಡೆ ಗೊಳಿಸಿದ್ದ ಗುಳಿಗಾ...ಗುಳಿಗಾ...ಹಾಡು ದೇಶಾದ್ಯಂತ ಎಬ್ಬಿಸಿದ ಧೂಳು ಇನ್ನೂ ಹಾರಾಡುತ್ತಿರುವಂತೆಯೇ, ಈಗ ಶ್ರೇಯಾ ಘೋಷಾಲ್ ಜೊತೆ ಅರ್ಮಾನ್ ಮಲಿಕ್ ಹಾಡಿರುವ ಅತ್ಯಂತ ಸುಮಧುರ ಮತ್ತು "ರಿಚ್ ಪೊಯೆಟಿಕ್" ಸಾಲುಗಳುಳ್ಳ , ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ಹಾಡು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ..! ಈ ನಡುವೆ ವಿಶೇಷ ವಿದ್ಯಮಾನವೆಂಬಂತೆ,ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕವಿ ಸುಧೀರ್ ಅತ್ತಾವರ್ ಬರೆದ ಈ ಹಾಡಿನ ಕಾವ್ಯಮಯ ಸಾಹಿತ್ಯವನ್ನು ಚಿತ್ರತಂಡವು ಮೊದಲು ಬಿಡುಗಡೆಗೊಳಿಸಿದೆ. ಇಲ್ಲಿದೆ ಈ ಅಪರೂಪದ ಸಾಹಿತ್ಯ... (ಶ್ರೇಯ ಘೋಷಲ್)   ಗಾಳಿ ಗಂಧ.....ತೀಡಿ ತಂದಾ.....  ಶಬ್ದವಿರದ ಮಾತೂ.... ! (ಅರ್ಮಾನ್ ಮಲಿಕ್):   ಕೇಳಿದಂತಾ.... ಜೋಡಿಯಿಂದಾ.....  ಮುಗ್ಧ ವಿರಹ ಹಾಡೂ....!! ಗಾಳಿ ಗಂಧ.....ತೀಡಿ ತಂದಾ.....  ಶಬ್ದವಿರದ ಮಾತೂ.... ! ( ಶ್ರೇಯ ಘೋಷಲ್ )   ಮೂಗುದಾಣ ಹಾಕಲೇನು ಪ್ರೀತಿ.....  ಸಾಕು ಗಿಣಿಯೇ..?  ಮೂರು ದಾರ ಕಟ್ಟಿ ನಾನು ಬಂಧಿ....  ಸಾಕು ಪ್ರಿಯನೇ.....! (ಅರ್...

"ಲ್ಯಾಂಡ್ ಲಾರ್ಡ್ " ನಲ್ಲಿ ದುನಿಯಾ ವಿಜಯ್ - ರಾಜ್ ಬಿ ಶೆಟ್ಟಿ ಜುಗಲ್ ಬಂದಿ...

"ಲ್ಯಾಂಡ್ ಲಾರ್ಡ್ " ನಲ್ಲಿ ದುನಿಯಾ ವಿಜಯ್ - ರಾಜ್ ಬಿ ಶೆಟ್ಟಿ ಜುಗಲ್ ಬಂದಿ... "ದಿ ರೂಲರ್" ಟೀಸರ್ ಮೂಲಕ ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯ..  ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ - ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್, ರಚಿತರಾಮ್ ಅಭಿನಯದ 'ಲ್ಯಾಂಡ್ ಲಾರ್ಡ್' ಚಿತ್ರದ ಸರ್ವೈವರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ. ಈಗ ಈ ಚಿತ್ರದ "ದಿ ರೂಲರ್" ಟೀಸರ್ ಬಿಡುಗಡೆಯಾಗಿದೆ‌. "ದಿ ರೂಲರ್" ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ. ಇದು ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ಆಗಿದೆ. "ದಿ ರೂಲರ್" ಟೀಸರ್ ನೋಡಿದ ರಾಜ್ ಬಿ ಶೆಟ್ಟಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಬಹು ನಿರೀಕ್ಷಿತ ಈ ಚಿತ್ರ 2026ರ ಜನವರಿ 23 ರಂದು ಬಿಡುಗಡೆಯಾಗುತ್ತಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.  ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ನಿರ್ದೇಶಕ ಜಡೇಶ್ ಅವರು‌ ಎಂದು ಮಾತನಾಡಿದ ನಟ ರಾಜ್ ಬಿ ಶೆಟ್ಟಿ, ಏಕೆಂದರೆ ಒಬ್ಬ ನಿರ್ದೇಶಕ ಗೆಲ್ಲಲ್ಲೇಬೇಕು ಎಂದು ಬಯಸುವವನು ನಾನು. ಈ ಚಿತ್ರದಲ್ಲಿ ನನ್ನದು ಶೋಷಕ ವರ್ಗದಲ್ಲಿರುವಂ...

ಖೈದಿ ಪ್ರೇಮಿ ಚಿತ್ರಕ್ಕೆ ಮುಹೂರ್ತ..

ಖೈದಿ ಪ್ರೇಮಿ ಚಿತ್ರಕ್ಕೆ ಮುಹೂರ್ತ ..    ಉತ್ತರ ಕರ್ನಾಟಕ ಭಾಗದ ಸಾಕಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ‌. ಇದೀಗ ರಾಯಚೂರು ಮೂಲದ ಯುವಕರ ತಂಡವೊಂದು ವಿಭಿನ್ನ ಕಾನ್ಸೆಪ್ಡ್ ಇಟ್ಟುಕೊಂಡು ಖೈದಿಪ್ರೇಮಿ ಎಂಬ ಚಿತ್ರ ಮಾಡಲು ಹೊರಟಿದೆ. ಮರುಜನ್ಮ ಮೂವೀಸ್ ನಿರ್ಮಾಣದ ಈ ಚಿತ್ರಕ್ಕೆ ವಂಶಿ ಎಡೆದೊರೆ (ಗಧಾರ) ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ, ನಿರ್ದೇಶಕ ಇಬ್ಬರೂ ರಾಯಚೂರಿನವರು ಎನ್ನುವುದು ವಿಶೇಷ.   ಪ್ರೀತಿ, ಪ್ರೇಮದ ಜತೆ ಮಾನವೀಯತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಕಥಾಹಂದರ ಹೆಣೆದಿರುವ ಖೈದಿಪ್ರೇಮಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ಪ್ರಥಮ ದೃಶ್ಯಕ್ಕೆ ಥ್ರಿಲ್ಲರ್ ಮಂಜು ಕ್ಲಾಪ್ ಮಾಡಿದರೆ, ನಿರ್ದೇಶಕ ವಸಂತ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಎಂ.ತಿಲಕ್ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ ಕೂಡ.  ಮೂಹೂರ್ತದ ನಂತರ ಮಾತನಾಡಿದ ನಿರ್ದೇಶಕ ವಂಶಿ ಎಡೆದೊರೆ ಖೈದಿ ಪ್ರೇಮ ಇದೊಂದು ಲವ್ ಸ್ಟೋರಿಯಾದರೂ ಮಾನವೀಯತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಕಥೆ ಮಾಡಿದ್ದೇನೆ. ಕಳೆದ 4 ವರ್ಷಗಳಿಂದ ಈ ಕಥೆ ರೆಡಿ ಮಾಡಿಟ್ಟುಕೊಂಡಿದ್ದು, ತುಂಬಾ ಹೋಮ್ ವರ್ಕ್ ಮಾಡಿದ್ದೇನೆ. ರಮೇಶ್ ಭಟ್, ಥ್ರಿಲ್ಲರ್ ಮಂಜು, ಅಭಿಜಿತ್ ರಂಥ ಹಿರಿಯರ ಸಹಕಾರ ತಗೊಂಡು ಮುಂದುವರಿಯುತ್ತಿದ್ದೇನೆ. ಕಥೆಯಲ್ಲಿ ನಾವೀನ್ಯತೆ ಇದೆ, ಫೆಬ್ರವರಿಯಿಂದ ಆರಂಭಿಸಿ ...

ಡಿಸೆಂಬರ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ತೆರೆಗೆ..

ಡಿಸೆಂಬರ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ತೆರೆಗೆ..  ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ದಿ ಡೆವಿಲ್" ಚಿತ್ರ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಹಾಗೂ ಟ್ರೇಲರ್ ಅಭಿಮಾನಿಗಳ ಮನ ಗೆದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇತ್ತೀಚೆಗೆ ಅನಾವರಣಗೊಂಡ ಟ್ರೇಲರ್ ಗಂತೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. "ದಿ ಡೆವಿಲ್" ಅಬ್ಬರವನ್ನು ತೆರೆಯ ಮೇಲೆ ನೋಡಲು ದರ್ಶನ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.   ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ "ದಿ ಡೆವಿಲ್" ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ. ಕಾಂತರಾಜ್ ಸಂಭಾಷಣೆ ಬರೆದಿದ್ದಾರೆ. ತಶ್ವಿನಿ ವೀರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ದರ್ಶನ್ ಅವರಿಗೆ ನಾಯಕಿಯಾಗಿ ರಚನ ರೈ ಅಭಿನಯಿಸಿದ್ದಾರೆ. ...

ಡೆವಿಲ್ ರಿಲೀಸ್ ಗೂ‌‌ ಮೊದ್ಲೇ ರಚನಾ ರೈಗೆ ಕುದುರಿದ ಮತ್ತೊಂದು ಚಾನ್ಸ್..

ಡೆವಿಲ್ ರಿಲೀಸ್ ಗೂ‌‌ ಮೊದ್ಲೇ ರಚನಾ ರೈಗೆ ಕುದುರಿದ ಮತ್ತೊಂದು ಚಾನ್ಸ್.. ಪ್ರತಿಷ್ಟಿತ ನವರತ್ನ ಆಭರಣದ ಬ್ರ್ಯಾಂಡ್ ಅಂಬಾಸಿಡರ್ ಆದ ಕರಾವಳಿ ಬಾಲೆ.. ಡೆವಿಲ್ ಕ್ವೀನ್ ರಚನಾ ರೈ ಈಗ ಪ್ರತಿಷ್ಠಿತ ಆಭರಣ ಬ್ರ್ಯಾಂಡ್‌ ಅಂಬಾಸಿಡರ್..... ವರ್ಷಾಂತ್ಯಕ್ಕೆ ತೆರೆಗೆ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಮೇಲೆ ಭಾರೀ‌ ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಚಿತ್ರ ಗಮನಸೆಳೆದಿದೆ. ಡೆವಿಲ್ ಚಿತ್ರದ ಮೂಲಕ ಕರಾವಳಿ ಸುಂದರಿ ರಚನಾ ರೈ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದಾರೆ. ದರ್ಶನ್ ಗೆ ಜೋಡಿಯಾಗಿ ಅಭಿನಯಿಸಿದ್ದಾರೆ.  ಒಂದ್ಕಡೆ ವೃತ್ತಿ ಬದುಕಿನ ಆರಂಭದಲ್ಲಿ ಸ್ಟಾರ್ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಖುಷಿ.‌ ಮತ್ತೊಂದ್ಕಡೆ ಡೆವಿಲ್ ಚಿತ್ರ ಡಿಸೆಂಬರ್ 11ರಂದು ಬಿಡುಗಡೆಯಾಗುತ್ತಿರುವ ಸಂಭ್ರಮ. ಈ ನಡುವೆ ತಮ್ಮ ಚೊಚ್ಚಲ ಕನ್ನಡ ಚಿತ್ರ ಬಿಡುಗಡೆ ಹೊಸ್ತಿಲಿನಲ್ಲಿ ಡೆವಿಲ್ ಕ್ವೀನ್ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ರಚನಾ ರೈ ಈಗ ಪ್ರತಿಷ್ಠಿತ ಆಭರಣವೊಂದರ ರಾಯಭಾರಿಯಾಗಿದ್ದಾರೆ. ನವರತ್ನ ಆಭರಣದ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದಾರೆ ರಚನಾ ರೈ. ಈಗಾಗಲೇ ತುಳು ಚಿತ್ರಗಳ ಮೂಲಕ ಅಭಿನಯದಲ್ಲಿ‌ ನಿಪೂಣೆ ಎನಿಸಿಕೊಂಡಿರುವ ಇವರು ಅಂದಗಾರ್ತಿ ಕೂಡ. ಪಕ್ಕದ್ಮೇಲೆ ಹುಡುಗಿ ಫೀಲ್ ಕೊಡುವ ರಚನಾ ರೈ ತಮ್ಮ ಮೊದಲ ಕನ್ನಡ ಸಿನಿಮಾ ಬಿಡುಗಡೆಗೂ‌ ಮೊದಲೇ ಪ್ರತಿಷ್ಠಿತ ಆಭರಣದ ರಾಯಭಾರಿ...

ಮಾರ್ಕ್ ಟ್ರೇಲರ್ ರಿಲೀಸ್...ಖಾಕಿಯಲ್ಲಿ ಖದರ್ ತೋರಿಸಿದ ಕಿಚ್ಚ..

ಮಾರ್ಕ್ ಟ್ರೇಲರ್ ರಿಲೀಸ್... ಖಾಕಿಯಲ್ಲಿ ಖದರ್ ತೋರಿಸಿದ ಕಿಚ್ಚ.. ಆಕ್ಷನ್ ಪ್ಯಾಕ್ಡ್ ಮಾರ್ಕ್ ಟ್ರೇಲರ್ ಅನಾವರಣ... ಟ್ರೈಲರ್‌‌ನಲ್ಲಿ ಅಬ್ಬರಿಸಿದ ಕಿಚ್ಚ.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಮಾರ್ಕ್ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಇಡೀ ತಂಡ ಭಾಗಿಯಾಗಿತ್ತು. ಟ್ರೇಲರ್ ಬಿಡುಗಡೆ ಬಳಿಕ ನಟ ಕಿಚ್ಚ ಸುದೀಪ್ ಮಾತನಾಡಿ, ವಿಜಯ್ ಹಾಗೂ ಚಂದ್ರು ಮಲಗಿಕೊಳ್ಳದೇ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನನ್ನ ಮಾತಿಗೆ ಧೃಡವಾಗಿ ನಿಂತಿದ್ದು ನನ್ನ ಇಡೀ ತಂಡ. ಟೆಕ್ನಿಕಲ್ ಟೀಂ ಹಾಗೂ ಇಡೀ‌ ಕಲಾವಿದರು. ಡಿಸೆಂಬರ್ ನಲ್ಲಿ ಬರ್ತಿರುವ ಸೂಪರ್ ಸ್ಟಾರ್ಸ್ ಸಿನಿಮಾಗಳಿಗೆ ಉತ್ತರಿಸಿದ‌ ಕಿಚ್ಚ, ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಯಾವತ್ತು ತರಕಾರಿ‌, ಅಡುಗೆ‌ ಕಮ್ಮಿಯಾಗಿಲ್ಲ. ಇನ್ನೂ ಸೀಟ್ ಗಳು ಹೇಗೆ ಕಡಿಮೆಯಾಗುತ್ತವೆ. ಜನ ಬರದೇ ಇರ್ತಾರಾ.,? ಶೂಟಿಂಗ್ ಜರ್ನಿ ಬಗ್ಗೆ ಮಾತನಾಡಿದ ಅವರು, ನಾಲ್ಕು ತಿಂಗಳು ಐದು ದಿನ ಶೂಟಿಂಗ್ ನಡೆಸಲಾಗಿದೆ. 80 ಲೋಕೇಷನ್, 15-20 ಸೆಟ್ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಇಡೀ ಚಿತ್ರರಂಗ ಇವತ್ತು ಇಲ್ಲಿದೆ. ಈ ರೀತಿ ಕಾರ್ಯಕ್ರಮ ತಿಂಗಳಲ್ಲಿ ಮೂರ್ನಾಲ್ಕು ನಡೆಯುತ್ತಿವೆ. ಮಾರ್...

ತೀರ್ಥರೂಪ ತಂದೆಯವರಿಗೆ ಟ್ರೇಲರ್ ರಿಲೀಸ್..ಎಮೋಷನ್ ಕಥೆಯೊಂದಿಗೆ ಬಂದ ಹೊಂದಿಸಿ ಬರೆಯಿರಿ‌ ನಿರ್ದೇಶಕ..

ತೀರ್ಥರೂಪ ತಂದೆಯವರಿಗೆ ಟ್ರೇಲರ್ ರಿಲೀಸ್.. ಎಮೋಷನ್ ಕಥೆಯೊಂದಿಗೆ ಬಂದ ಹೊಂದಿಸಿ ಬರೆಯಿರಿ‌ ನಿರ್ದೇಶಕ.. ತೀರ್ಥರೂಪ ತಂದೆಯವರಿಗೆ ಸಿನಿಮಾ ಮೂಲಕ ಎಮೋಷನ್ ಕಥೆ ಹೇಳಲು ಹೊರಟ ರಾಮೇನಹಳ್ಳಿ ಜಗನ್ನಾಥ್.. ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಿ ಎಂಬ ಸಂದೇಶ ಕೊಟ್ಟಿರುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಈಗ ಅವರು ಬದುಕಿನಲ್ಲಾದ ಒಂದು ಚಿಕ್ಕ ತಪ್ಪು ಕುಟುಂಬವನ್ನು ಎಷ್ಟು ದೂರು ಮಾಡುತ್ತದೆ. ಅದು ಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಆಶಯದ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಕಂಟೆಂಟ್ ನೊಂದಿಗೆ ಬಂದಿದ್ದಾರೆ. ಈ ಕಥೆಗೆ ಚಿತ್ರಕ್ಕೆ ತೀರ್ಥರೂಪ ತಂದೆಯವರಿಗೆ ಎಂಬ ಅಪ್ಪಟ ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಎಂಎಂಬಿ‌ ಲೆಗಸಿಯಲ್ಲಿ ನಿನ್ನೆ ಟ್ರೇಲರ್ ಲಾಂಚ್ ಕಾರ್ಯಕ್ರಮ ಜರುಗಿತು. ಹೊಂದಿಸಿ ಬರೆಯಿರಿ ಚಿತ್ರತಂಡ ತೀರ್ಥರೂಪ ತಂದೆಯವರಿಗೆ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.  ಟ್ರೇಲರ್ ಬಿಡುಗಡೆ ಬಳಿಕ ಹಿರಿಯ ನಟಿ ಸಿತಾರಾ ಮಾತನಾಡಿ,‌ ನನಗೆ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಕೊಟ್ಟಿದ್ದಾರೆ. ನಿಮಗೆ ನನ್ನ ಪಾತ್ರ ಇಷ್ಟವಾಗುತ್ತದೆ. ಕಥೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಕನ್ನಡದಲ್ಲಿ ತುಂಬಾ ದಿನಗಳ ಬಳಿಕ ಬಣ್ಣ ಹಚ್ಚಿದ್ದೇನೆ. ನಾನು ನನ್ನ ಕನಸು ಆದಮೇಲೆ ರಾಜೇಶ್ ನಟರಂಗ ಅವರ ಜೊತೆ ನಟಿಸಿದ್ದೇನೆ ಎಂದರು. ...

"ಘಾರ್ಗಾ" ಚಿತ್ರದಲ್ಲಿ ನೀನು ನನಗೆ ರೊಮ್ಯಾಂಟಿಕ್ ಹಾಡು‌‌...

"ಘಾರ್ಗಾ" ಚಿತ್ರದಲ್ಲಿ ನೀನು ನನಗೆ  ರೊಮ್ಯಾಂಟಿಕ್ ಹಾಡು‌‌...     ಶಿವರಾಜ್‌ಕುಮಾರ್ ಅಭಿನಯದ ಜೋಗಿ, ಪ್ರೇಮ್ ನಟನೆ, ನಿರ್ದೇಶನದ ಪ್ರೀತಿ ಏಕೆ ಭೂಮಿ ಮೇಲಿದೆ ಹೀಗೆ ಯಶಸ್ವಿ ಚಿತ್ರಗಳನ್ನೇ ನಿರ್ಮಿಸಿದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ತಮ್ಮ ಪುತ್ರ ಅರುಣ್ ರಾಮ್‌ಪ್ರಸಾದ್‌ರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಆ ಚಿತ್ರದ ಹೆಸರು ಘಾರ್ಗ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ಚಿತ್ರದ 'ನೀನು ನನಗೆ' ಎಂಬ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲಾಯಿತು, ಇದೊಂದು ಅಡ್ವೆಂಚರಸ್ ಡ್ರಾಮಾ ಕಥಾನಕವಾಗಿದ್ದು, ಚಿತ್ರದಲ್ಲಿ ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ. ಶಶಿಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಫಾರ್ಗಾ ಒಂದು ಊರಿನ ಹೆಸರು. ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ.     ಈ ಸಂದರ್ಭದಲ್ಲಿ ನಿರ್ಮಾಪಕ ರಾಮ್‌ಪ್ರಸಾದ್ ಮಾತನಾಡುತ್ತ ಚಿತ್ರರಂಗದಲ್ಲಿ 40 ವರ್ಷ ಆಡಿಯೋ ಕಂಪನಿ ಮಾಲೀಕ, ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ, ಇದೀಗ ನನ್ನ ಮಗನನ್ನು ಲಾಂಚ್ ಮಾಡುತ್ತಿದ್ದೇನೆ. ಈ ಚಿತ್ರವನ್ನು 4 ವರ್ಷಗಳ ಹಿಂದೆಯೇ ಶುರು ಮಾಡಿದ್ದೆವು, ಹಲವಾರು ಕಾರಣಗಳಿಂದ ತಡವಾಯಿತು, ಇದೊಂದು ವಿಭಿನ್ನ ಜಾನರ್ ಚಿತ್ರ, ನಾಯಕ ಇಲ್ಲಿ 3 ಗೆಟಪ್‌ಗಳಲ್ಲಿ ಕಾಣಿಸ...

ಟೀಸರ್ ನಲ್ಲೇ ಗಮನ ಸೆಳೆದ ಹೇಮಂತ್ ಕುಮಾರ್ ಅಭಿನಯದ "ಆಲ್ಫಾ MEN LOVE ವೆಂಗೇನ್ಸ್..

ಟೀಸರ್ ನಲ್ಲೇ ಗಮನ ಸೆಳೆದ ಹೇಮಂತ್ ಕುಮಾರ್ ಅಭಿನಯದ "ಆಲ್ಫಾ MEN LOVE ವೆಂಗೇನ್ಸ್.. L A ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ವಿಜಯ್ ನಿರ್ದೇಶನ... ಮಾಲೂರಿನ ಹೇಮಂತ್ ಕುಮಾರ್ "ಆಲ್ಫಾ MEN LOVE VENGEANCE* ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರವನ್ನು " ಗೀತಾ" ಹಾಗೂ "ಗುರುದೇವ ಹೊಯ್ಸಳ" ಚಿತ್ರಗಳ ನಿರ್ದೇಶಕ ವಿಜಯ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಲಹರಿ ವೇಲು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.  ನನಗೆ ಮಾಸ್ತಿ ಅವರ ಮೂಲಕ ನಾಯಕ ಹೇಮಂತ್ ಕುಮಾರ್ ಅವರ ಪರಿಚಯವಾಯಿತು. ಅವರಿಗಿರುವ ಸಿನಿಮಾ ಬಗ್ಗೆಗಿನ ಆಸಕ್ತಿ ಬಹಳ ಇಷ್ಟವಾಯಿತು. ಹೇಮಂತ್ ಕುಮಾರ್ ಅವರು ಒಂದೊಳ್ಳೆ ಕಥೆ ಇದ್ದರೆ ಸಿನಿಮಾ ಮಾಡೋಣ ಎಂದು ಹೇಳಿದರು. ಲವ್ ಜಾನರ್ ನ ಚಿತ್ರ ಬೇಡ ಎಂದರು. ಆಗ ಈ "ಆಲ್ಫಾ #MEN LOVE VENGEANCE* ಚಿತ್ರದ ಕಥೆ ಹೇಳಿದೆ. ಅವರಿಗೆ ಇಷ್ಟವಾಯಿತು. ಮಾರ್ಚ್ ನಲ್ಲಿ ಚಿತ್ರ ಪ್ರಾರಂಭವಾಯಿತು. ಈಗ ಮುಕ್ತಾಯ ಹಂತದಲ್ಲಿದೆ. ಫೆಬ್ರವರಿ ವೇಳೆಗೆ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಇದು ಆಕ್ಷನ್ ಥ್ರಿಲ್ಲರ್...