"ಉಡಾಳ" ಚಿತ್ರಕ್ಕೆ 25 ದಿನಗಳ ಸಂಭ್ರಮ...
ಉತ್ತರ ಕರ್ನಾಟಕದ ಭಾರಿ ದೊಡ್ಡ ಪಿಚ್ಚರ್ ಎನ್ನುವ ಟ್ಯಾಗ್ ಲೈನ್ ಮೂಲಕ ಹೊರಬಂದ ಅಪ್ಪಟ ಉತ್ತರ ಕರ್ನಾಟಕದ ಉಡಾಳ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಚಿತ್ರತಂಡ ಹಂಚಿಕೊಂಡಿದೆ.
ಈ ಹಿಂದೆ ಪದವಿ ಪೂರ್ವ ಚಿತ್ರವನ್ನು ನಿರ್ಮಿಸಿ ಯಶಸ್ಸು ಕಂಡಿದ್ದ ದಾವಣಗೆರೆ ಮೂಲದ ರವಿ ಶಾಮನೂರು ಮತ್ತು ಯೋಗರಾಜ್ ಭಟ್ ಉಡಾಳ ಚಿತ್ರವನ್ನು ನಿರ್ಮಿಸಿ ಮತ್ತೊಮ್ಮೆ ಯಶಸ್ವಿ ಕಂಡಿದ್ದಾರೆ,
ನಾಯಕನಾಗಿ ಪೃಥ್ವಿ ಶಾಮನೂರು ತಮ್ಮ ನಟನೆ ನೃತ್ಯ ಸಾಹಸ ಮೂಲಕ ಪ್ರೇಕ್ಷಕರ ಮನ ಸೆಳೆದಿದ್ದು ಚಿತ್ರರಂಗದ ಭರವಸೆಯ ನಾಯಕ ನಟನಾಗಿ ಹೊರಹೊಮ್ಮಿ ಜೊತೆಗೆ ಚಿತ್ರದ ಯಶಸ್ಸಿನಿಂದ ಮುಂದಿನ ಚಿತ್ರಗಳ ಕಥೆಗಳ ಆಯ್ಕೆಯಲ್ಲಿ ಬಿಜಿಯಾಗಿದ್ದಾರೆ.
ಇನ್ನು ನಿರ್ದೇಶಕ ಅಮೋಲ್ ಪಾಟೀಲ್ ಅವರಿಗೆ ಮೊದಲನೇ ನಿರ್ದೇಶನದ ಚಿತ್ರವಾಗಿದ್ದು ಮೊದಲ ಚಿತ್ರದಲ್ಲೇ ಯಶಸ್ವಿ ಕಂಡು ತಮ್ಮ ಕೆಲಸಕ್ಕೆ ಚಿತ್ರರಂಗದಲ್ಲಿ ಉತ್ತಮ ಪ್ರಶಂಸೆ ಪಡೆದುಕೊಂಡು ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ.
ಇನ್ನು ಬಹುಪಾಲು ಉತ್ತರ ಕರ್ನಾಟಕದ ಕಲಾವಿದರು ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದು ಇನ್ನೊಂದು ವಿಶೇಷ, ಅಮೋಲ್ ಪಾಟೀಲ್ ಮತ್ತು ವೀರೇಶ್ ಪಿಎಂ ಚಿತ್ರಕಥೆ ಸಂಭಾಷಣೆ ಬರೆದಿದ್ದು ಚಿತ್ರಕ್ಕೆ ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸಿದ್ದಾರೆ, ಸಹ ಮತ್ತು ಪೋಷಕ ಕಲಾವಿದರಾಗಿ ಬಿರಾದರ್ ಬಲರಾಜ್ವಾಡಿ ಹರೀಶ್ ಹಿರಿಯೂರ್ ಪ್ರವೀಣ್ ಕುಮಾರ್ ಗಸ್ತಿ ದಯಾನಂದ್ ಬೀಳಗಿ ಮಾಳು ನಿಪ್ಪನಾಳ ರೇಣುಗೋಪಿ ಗೋವಿಂದೇಗೌಡ ಶಿಲ್ಪಾ ಶಾಂತಕುಮಾರ್
ಸದಾನಂದ ವಾದಿರಾಜ್ ಸುಮಿತ್ ದಾನಪ್ಪ ಮುಂತಾದ ಕಲಾವಿದರು ನಟಿಸಿದ್ದಾರೆ.
ಚೇತನ್ ಸೊಸ್ಕ ಅವರ ಅದ್ಭುತ ಸಂಗೀತ ಯೋಗರಾಜ್ ಭಟ್ ಅವರ ಸಾಹಿತ್ಯ ಮಧು ತುಂಬಕೆರೆ ಸಂಕಲನ ಶಿವಕುಮಾರ್ ನೂರಂಬಡ ಛಾಯಾಗ್ರಹಣ ಭಜರಂಗಿ ಮೋಹನ್ ರಘು ಅವರ ನೃತ್ಯ ಸಂಯೋಜನೆ ವಿನೋದ್ ಮತ್ತು ಅರ್ಜುನ್ ಅವರ ಸಾಹಸ ಈ ಚಿತ್ರಕ್ಕಿದೆ, ಮಾಳು ನಿಪ್ಪನಾಳ ಬಾಳು ಬೆಳಗುಂದಿ ಜೆಸ್ಕರಣ್ ಸಿಂಗ್ ಚೇತನ್ ಸೊಸ್ಕ ಕರಿಬಸವ ಸೃಷ್ಟಿ ಶಾಮನೂರು ಚಿತ್ರಕ್ಕೆ ಹಾಡಿದ್ದಾರೆ. ಉಡಾಳ ಚಿತ್ರ 25 ದಿನಗಳನ್ನು ಪೂರೈಸಿ ಯಶಸ್ಸಿನ ಹಾದಿಯನ್ನು ಮುಂದುವರೆಸಿದೆ
Comments
Post a Comment