Skip to main content

Posts

Showing posts from September, 2025

ಕಾಂತಾರ 1 ಜೊತೆಗೆ ನಿಮ್ಮ ಥಿಯೇಟರ್‌ನಲ್ಲಿ ಕೋಣ ಚಿತ್ರದ ಟ್ರೇಲರ್..

ಕಾಂತಾರ 1 ಜೊತೆಗೆ ನಿಮ್ಮ ಥಿಯೇಟರ್‌ನಲ್ಲಿ ಕೋಣ ಚಿತ್ರದ ಟ್ರೇಲರ್.. ಹೊಸ ಅವತಾರದಲ್ಲಿ ಸೆನ್ಸೇಷನಲ್ ಸ್ಟಾರ್ ಕೋಮಲ್‌ಕುಮಾರ್.. ಕುತೂಹಲ ಹೆಚ್ಚಿಸಿದ ಕೋಣ ಚಿತ್ರದ ಟ್ರೇಲರ್.. ಕೋಮಲ್ ಹೊಸ ಅವತಾರ ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಗೆ ಬರೋದಿಕ್ಕೆ ಮೂರೇ ದಿನ ಬಾಕಿ. ಕೋಮಲ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಅದೇನಪ್ಪ ಅಂತೀರಾ..? ಕಾಂತಾರ 1 ಸಿನಿಮಾ ಬಿಡುಗಡೆಯಾಗುವ ಥಿಯೇಟರ್ ನಲ್ಲಿ ಕೋಣ ಚಿತ್ರದ ಟ್ರೇಲರ್ ಬಿಡುಗಡೆ..  ಸಹಜಾಭಿನಯದ ಮೂಲಕ ಮನೆ ಮಾತಾಗಿರುವ ಕೋಮಲ್ ಕುಮಾರ್ ಇದೀಗ ಕೋಣ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿಯಾಗುತ್ತಿದ್ದಾರೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದ ಕೋಣ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ. ಕಾಮಿಡಿ, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಇಲ್ಲಿ ಕೋಮಲ್ ಹೊಸ ಅವತಾರದಲ್ಲಿ ಕಾಣಿಸುತ್ತಾರೆ.  ನಿರ್ಮಾಣದಲ್ಲಿ ಕೈ ಜೋಡಿಸಿರುವ ತನಿಷಾ ಕುಪ್ಪಂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೀರ್ತಿರಾಜ್, ರಿತ್ವಿ ಜಗದೀಶ್, ನಮ್ರತಾ ಗೌಡ, ವಿನಯ್ ಗೌಡ, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತಿç, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್...

ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಗೆ ತೆರೆ..

ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಗೆ ತೆರೆ.. ಪಪ್ಪಿ ಸಿನಿಮಾಗೆ ಮೊದಲ ಸ್ಥಾನ... ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 2ನೇ ಆವೃತ್ತಿಯಲ್ಲಿ ಗೆದ್ದ ಸಿನಿಮಾಗಳ ಕಂಪ್ಲೀಟ್ ಪಟ್ಟಿ ಇಲ್ಲಿದೆ.. ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ‌ ಚಿತ್ರೋತ್ಸವ ಆಯೋಜನೆ ಮಾಡಲಾಗುತ್ತದೆ. ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆದಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪಡೆದ ಸಿನಿಮಾ ಯಾವುದು? ವಿನ್ನರ್-ಪಪ್ಪಿ ಸಿನಿಮಾ • 1st ರನ್ನರ್ ಅಪ್-ಕರಡಿಗುಡ್ಡ ಸಿನಿಮಾ • 2nd ರನ್ನರ್ ಅಪ್-ಬಾಲ್ಯ ಸಿನಿಮಾ • ಅತ್ಯುತ್ತಮ ಬಾಲ ಕಲಾವಿದ- ಪುರುಷ ವಿಭಾಗ  ವರುಣ್ ಗಂಗಾಧರ್ – ಸ್ವರಾಜ್ಯ •ಅತ್ಯುತ್ತಮ ಬಾಲ ಕಲಾವಿದೆ  ರುತು - ಟೇಕ್ವಾಂಡೋ ಗರ್ಲ್ • ಅತ್ಯುತ್ತಮ ಬಾಲ ಕಲಾವಿದ ಮಾಸ್ಟರ್ ಶ್ರೇಯಸ್ – ಜೀನಿಯಸ್ ಮುತ್ತಾ • ಅತ್ಯುತ್ತಮ ಬಾಲ ಕಲಾವಿದೆ ಇದು ನಮ್ಮ ಶಾಲೆ -ಪುಣ್ಯಶ್ರೀ • ಅತ್ಯುತ್ತಮ ನಟ  ವಿಜಯ್ ರಾಘವೇಂದ್ರ -ಜೀನಿಯಾಸ್ ಮುತ್ತಾ • ಅತ್ಯುತ್ತಮ ನಟಿ ವೀಣಾ ಸುಂದರ್- ಸ್ವರಾಜ್ಯ • ಅತ್ಯುತ್ತಮ ಪೋಷಕ ನಟ   ಸ...

ಸೆಟ್ಟೇರಿತು ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಸಿನಿಮಾ ಪರಾಕ್..

ಸೆಟ್ಟೇರಿತು ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಸಿನಿಮಾ ಪರಾಕ್.. ಬಂಡಿ ಮಹಾಕಾಳಿ ಆಶೀರ್ವಾದದೊಂದಿಗೆ ಸೆಟ್ಟೇರಿದ ಶ್ರೀಮುರಳಿ ಪರಾಕ್ ಸಿನಿಮಾ.. 'ಪರಾಕ್'ಗೆ ಮುಹೂರ್ತದ ಸಂಭ್ರಮ..ಬಂಡಿ ಮಹಾಕಾಳಿ ಸನ್ನಿಧಿಯಲ್ಲಿ ಶ್ರೀಮುರಳಿ ಹೊಸ ಚಿತ್ರದ ಮುಹೂರ್ತ.. ಬಘೀರ ಸಿನಿಮಾದ ಸಕ್ಸಸ್ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಪರಾಕ್ ಎಂಬ ಚಿತ್ರ ಒಪ್ಪಿಕೊಂಡಿದ್ದಾರೆ. ಇಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇಗುಲದಲ್ಲಿ ಪರಾಕ್ ಚಿತ್ರದ ಮುಹೂರ್ತ ನೆರವೇರಿದೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಬಳಿಕ ಸುದ್ದಿಗಾರರೊಂದಿಗೆ ಶ್ರೀಮುರಳಿ ಮಾತನಾಡಿ,  "ಪರಾಕ್ ವಿಂಟೇಜ್ ಸ್ಟೈಲ್‌ನಲ್ಲಿ ನಡೆಯುವ ಸಿನಿಮಾ. ಮುಂದಿನ ಚಿತ್ರ ಯಾವ ರೀತಿ ಕಥೆ ಆಯ್ಕೆ ಮಾಡಬೇಕು ಎಂಬ ಟೆನ್ಷನ್ ಇತ್ತು. ಸುಮಾರು 200 ಕಥೆ ಕೇಳಿದ್ದೆ. ಪರಾಕ್ ಸಿನಿಮಾ ತಂಡದ ಜೊತೆ ಎರಡು ವರ್ಷ ಈಗಾಗಲೇ ಟ್ರಾವೆಲ್ ಮಾಡಿದ್ದೆ. ಈ‌ ತಿಂಗಳಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ" ಎಂದು ಮಾಹಿತಿ ನೀಡಿದರು. ಯುವ ಪ್ರತಿಭೆ ಹಾಲೇಶ್ ಕೋಗುಂಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಇವರಿಗೆ ಇದು ಮೊದಲ ಚಿತ್ರವಾಗಿದೆ. ಈ ಮೊದಲು ಕೆಲವು ಕಿರು ಚಿತ್ರ ಮಾಡಿರೋ ಅನುಭವ ಇದೆ. ಇದೀಗ ಪರಾಕ್ ಮೂಲಕ ಡೈರೆಕ್ಟರ್ ಆಗುತ್ತಿದ್ದ...

ನಟ ಅನಿರುದ್ಧ ಜತಕರ ಬರೆದಿರುವ "ಸಾಲುಗಳ ನಡುವೆ" ಪುಸ್ತಕ ಅನಾವರಣ..

ನಟ ಅನಿರುದ್ಧ ಜತಕರ ಬರೆದಿರುವ "ಸಾಲುಗಳ ನಡುವೆ" ಪುಸ್ತಕ ಅನಾವರಣ.. ಸಮಾರಂಭದಲ್ಲಿ ಹಿರಿಯ ಕಲಾವಿದೆ ಪದ್ಮಶ್ರೀ ಪುರಸ್ಕೃತರಾದ ಡಾ॥ ಭಾರತಿ ವಿಷ್ಣುವರ್ಧನ್, ಸಾಹಿತಿ ಜೋಗಿ ಹಾಗೂ ಪ್ರಕಾಶಕ ಜಮೀಲ್ ಸಾವಣ್ಣ ಉಪಸ್ಥಿತಿ.. ನಟನಾಗಿ ಕನ್ನಡಿಗರ ಮನ ಗೆದ್ದಿರುವ ಅನಿರುದ್ಧ ಜತಕರ ಉತ್ತಮ ಲೇಖಕರು ಹೌದು. ಇತ್ತೀಚೆಗೆ ಅನಿರುದ್ಧ ಅವರು ಬರೆದಿರುವ ‘ಸಾಲುಗಳ ನಡುವೆ’ ಎಂಬ ಪುಸ್ತಕದ ಅನಾವರಣ ಸಮಾರಂಭ ಜಯನಗರದ ಡಾ||ವಿಷ್ಣುವರ್ಧನ್ ಅವರ ನಿವಾಸ "ವಲ್ಮೀಕ"ದಲ್ಲಿ ನೆರವೇರಿತು. ಹಿರಿಯ ಕಲಾವಿದೆ ಪದ್ಮಶ್ರೀ ಪುರಸ್ಕೃತರಾದ ಡಾ॥ ಭಾರತಿ ವಿಷ್ಣುವರ್ಧನ್, ‘ಸಾಲುಗಳ ನಡುವೆ’ ಪುಸ್ತಕವನ್ನು ಅನಾವರಣ ಮಾಡಿದರು. ಸಾಹಿತಿ ಜೋಗಿ ಹಾಗೂ ಪ್ರಕಾಶಕ ಜಮೀಲ್ ಸಾವಣ್ಣ ಅವರು ಉಪಸ್ಥಿತರಿದ್ದರು. ನಂತರ ಈ ಕುರಿತು ಅತಿಥಿಗಳು ಹಾಗೂ ಲೇಖಕರು ಮಾತನಾಡಿದರು.  ನಾನು ಬರೆದಿರುವ 'ಸಾಲುಗಳ ನಡುವೆ' ಪುಸ್ತಕವನ್ನು ಕರ್ನಾಟಕ ರತ್ನ ಡಾ||ವಿಷ್ಣುವರ್ಧನ್ ಅವರಿಗೆ ಅರ್ಪಿಸುತ್ತೇನೆ ಎಂದು ಮಾತು ಆರಂಭಿಸಿದ ಲೇಖಕ ಅನಿರುದ್ಧ ಜತಕರ, ನಾನು ಬರವಣಿಗೆ ಆರಂಭಿಸಿದ್ದು 2008 ರಲ್ಲಿ. ಹಿರಿಯ ನಿರ್ದೇಶಕ ಎಂ.ಎಸ್ ಸತ್ಯು ಅವರ ‘ಇಜ್ಜೋಡು’ ಚಿತ್ರದಲ್ಲಿ ನಟಿಸುವಾಗ ಆ ಚಿತ್ರದ ಒಂದು ಸಂಭಾಷಣೆ ನನಗೆ ಈ ರೀತಿ ಹೇಳಿದರೆ ಚೆನ್ನಾಗಿರುತ್ತದೆ ಎನಿಸಿತು. ಅದನ್ನು ಸತ್ಯು ಅವರ ಬಳಿ ಹೇಳಿದೆ. ಅವರು ತುಂಬಾ ಚೆನ್ನಾಗಿದೆ ಅಂತ ಹೇಳ...

ಕಲರ್ಸ್ ಕನ್ನಡದಲ್ಲಿ ವಿನೂತನ ಧಾರಾವಾಹಿ ‘ಶ್ರೀ ಗಂಧದ ಗುಡಿ’

ಕಲರ್ಸ್ ಕನ್ನಡದಲ್ಲಿ ವಿನೂತನ ಧಾರಾವಾಹಿ  ‘ಶ್ರೀ ಗಂಧದ ಗುಡಿ’ ಮನೆಗೆ ಬಂದ ಸೊಸೆ ಮನಸ್ಥಿತಿ-ಮನೆಸ್ಥಿತಿ ಬದಲಾಯಿಸ್ತಾಳಾ? ಕರ್ನಾಟಕದಲ್ಲಿ ಸೌಂದರ್ಯವಿದೆ, ಸೌಕರ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಔದಾರ್ಯವಿದೆ.  ಕರುನಾಡು ಎಲ್ಲರನ್ನ ಪ್ರೀತಿಯಿಂದ ಸ್ವೀಕಾರ ಮಾಡುತ್ತೆ. ಕರುನಾಡ ತಾಯಿ ಎಲ್ಲರನ್ನ ತನ್ನ ಮಕ್ಕಳಂತೆ ನೋಡ್ತಾಳೆ, ಕಾಪಾಡ್ತಾಳೆ. ಕರುಳ ಕುಡಿಗಳ ಸುಖಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳೋ ಮಿಡಿವ ತಾಯಿ ಅವಳು.  ಅವಳು ಪ್ರೀತಿಯ ಕುಡಿ, ಅವಳು ನೆಲೆಸಿದ ನಾಡು ಶ್ರೀ ಗಂಧದ ಗುಡಿ.  —— ‘ಶ್ರೀ ಗಂಧದ ಗುಡಿ’ ನಮ್ಮ ಕನ್ನಡ ಮಣ್ಣಿನ ಸುಗಂಧ ಹೊಂದಿದ ಅಂದದ ಚೆಂದದ ಪದ. ಅಪ್ಪಟ ಕನ್ನಡತನವನ್ನ ಹೊರ ಹೊಮ್ಮಿಸೋ ಪದ. ಇಂತಹ ಅಪ್ಪಟ ಕನ್ನಡತನದಿಂದ ಮನೆ ಮಾತಾಗಿರೋದು ಕಲರ್ಸ್ ಕನ್ನಡ ಚಾನೆಲ್. ಮನ ಮುಟ್ಟೋ ಕತೆಗಳನ್ನ ಕನ್ನಡಿಗರ ಮನೆ ಮನಗಳಿಗೆ ಮುಟ್ಟಿಸ್ತೀರೋ ಕಲರ್ಸ್ ಕನ್ನಡ ಚಾನೆಲ್ ಇದೀಗ ‘ಶ್ರೀ ಗಂಧದ ಗುಡಿ, ಪ್ರೀತಿಯ ಕುಡಿ’ ಅನ್ನೋ ವಿನೂತನ ಧಾರಾವಾಹಿಯನ್ನ ಪ್ರೇಕ್ಷಕರಿಗೆ ತಲುಪಿಸ್ತಿದೆ. ‘ಶ್ರೀಗಂಧದ ಗುಡಿ’ ಅನ್ನೋದು ಹೆಣ್ಣು ದಿಕ್ಕಿಲ್ಲದ ಗಂಡಸರೇ ಒಟ್ಟಾಗಿ ಬದುಕ್ತಿರೋ  ಮನೆ. ಆ ಮನೆಗೆ ಬರೋ ಸೊಸೆ, ಮನೆ ಸ್ಥಿತಿ ಮತ್ತು ಮನಸ್ಥಿತಿಯನ್ನು ಬದಲಾಯಿಸ್ತಾಳಾ?” ಅನ್ನೋ ಕತೆ ಹೇಳೋ ಈ ಕೌಟುಂಬಿಕ ಧಾರಾವಾಹಿ ಅಕ್ಟೋಬರ್ 6 ರಿಂದ ಪ್ರತಿ ರಾತ್ರಿ 8ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್...

ಪ್ಯಾನ್- ಇಂಡಿಯಾ ಸ್ಟಾರ್‌ ಪ್ರಭಾಸ್ ಅಭಿನಯದ 'ದಿ ರಾಜಾಸಾಬ್' ಟ್ರೈಲರ್ ಬಿಡುಗಡೆ!

ಪ್ಯಾನ್- ಇಂಡಿಯಾ ಸ್ಟಾರ್‌ ಪ್ರಭಾಸ್ ಅಭಿನಯದ 'ದಿ ರಾಜಾಸಾಬ್' ಟ್ರೈಲರ್ ಬಿಡುಗಡೆ! ಬಹುನಿರೀಕ್ಷಿತ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಪ್ಯಾನ್-ಇಂಡಿಯಾ ಚಿತ್ರ 'ದಿ ರಾಜಾಸಾಬ್' ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ಥ್ರಿಲ್‌ ನೀಡುವುದರ ಜತೆಗೆ ಅಚ್ಚರಿಗೆ ದೂಡಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಭಾಸ್‌ ಕಾಣಿಸಿಕೊಂಡಿದ್ದಾರೆ. ಹಾರರ್‌ ಕಾಮಿಡಿ ಶೈಲಿಯ ಈ ಸಿನಿಮಾದಲ್ಲಿ, ಹೃದಯಸ್ಪರ್ಶಿ ಭಾವನೆಗಳನ್ನೂ ಬೆರೆಸಿದ್ದಾರೆ ನಿರ್ದೇಶಕ ಮಾರುತಿ.    ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿಸಲಾಗಿರುವ 'ದಿ ರಾಜಾಸಾಬ್', ಮೇಕಿಂಗ್‌, ದೊಡ್ಡ ಕ್ಯಾನ್ವಾಸ್‌ ಮೂಲಕವೇ ಎಲ್ಲರನ್ನು ನಿಬ್ಬೆರಗಾಗಿಸಿದೆ. ಈ ಚಿತ್ರವು ಭಾರತದಲ್ಲಿ ಇದುವರೆಗೆ ಕಾಣದ ಅತಿದೊಡ್ಡ ಹಾರರ್ ಸೆಟ್ ಹೊಂದಿದೆ. ನೋಡುಗರನ್ನು ಭಯಕ್ಕೆ ಕೆಡವುದರ ಜತೆಗೆ ಆ ದೃಶ್ಯ ವೈಭವವನ್ನು ಮೀರಿ, ಪ್ರೀತಿ, ಕುಟುಂಬ ಮತ್ತು ಪೂರ್ವಜರ ಪರಂಪರೆಯ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕರು. ಬ್ಲಾಕ್ಬಸ್ಟರ್ ಸಿನಿಮಾ 'ಕಲ್ಕಿ 2898 ಎಡಿ' ನಂತರ ಮತ್ತೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ ಪ್ರಭಾಸ್ . ಅವರ ನಟನಾ ಮೋಡಿ, ಮೈನವಿರೇಳಿಸುವ ಆಕ್ಷನ್‌ ಮಿಶ್ರಣ, ಹೊಸ ಪ್ರಭಾಸ್‌ ಎದುರಾಗುವ ಸೂಚನೆ ನೀಡಿದಂತಿದೆ.  ದಾಖಲೆ ಸೃಷ್ಟಿಸಿದ ಟ್ರೈಲರ್ ಬಿಡುಗಡೆ.. ಸಿನಿಮ...

NAASH ಸ್ಟುಡಿಯೋ ಲಾಂಚ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ..

NAASH ಸ್ಟುಡಿಯೋ ಲಾಂಚ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ.. ಬೆಂಗಳೂರಿನ ಮಾಗ್ರತ್‌ ರಸ್ತೆಯಲ್ಲಿನ ಗರುಡಾ ಮಾಲ್‌ನಲ್ಲಿ ಹೊಸ ಲಕ್ಸುರಿ ಬ್ಯೂಟಿ ಮತ್ತು ವೆಲ್‌ನೆಸ್‌ ಡೆಸ್ಟಿನೇಷನ್‌ NAASH ಸ್ಟುಡಿಯೋ, ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಯಾಗಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಸುಧಾರಾಣಿ ರಿಬ್ಬನ್‌ ಕಟ್ ಮಾಡುವ ಮೂಲಕ ಗ್ರ್ಯಾಂಡ್‌ ಲಾಂಚ್‌ಗೆ ಸಾಕ್ಷಿಯಾದರು.  ಉದ್ಘಾಟನೆ ಬಳಿಕ ಮಾತನಾಡಿದ ಸುಧಾರಾಣಿ, “NAASH ಉದ್ಘಾಟನೆ ಮಾಡುವುದು ನನಗೆ ಸಂತೋಷ ತಂದಿದೆ. ನಿಜವಾದ ಸೌಂದರ್ಯ ಸಂಪೂರ್ಣ ಸ್ವಯಂ ಆರೈಕೆಯಿಂದ ಬರುತ್ತದೆ ಎಂಬುದನ್ನು ಈ ಬ್ರ್ಯಾಂಡ್ ಅರಿತಿರುವುದು ಶ್ಲಾಘನೀಯ. ವಿಕ್ರಮ್ ಮತ್ತು ವಿವಾನ್ ಹಾಗೂ ಸಂಪೂರ್ಣ NAASH ತಂಡಕ್ಕೆ ನನ್ನ ಶುಭ ಹಾರೈಕೆಗಳು" ನ್ಯಾಶ್‌ನಲ್ಲಿ ಸಿಗುವ ಸೇವೆಗಳ ನೇಲ್ಸ್: ಸಿಗ್ನೇಚರ್ ಮ್ಯಾನಿಕ್ಯೂರ್ ಮತ್ತು ಪೆಡಿಕ್ಯೂರ್ ಲ್ಯಾಶಸ್: ತಜ್ಞರ ಲ್ಯಾಶ್ ಎಕ್ಸ್ಟೆನ್ಶನ್ ಹಾಗೂ ಎನ್ಹಾನ್ಸ್‌ಮೆಂಟ್‌ಗಳು ಸ್ಕಿನ್: ಅಡ್ವಾನ್ಸ್‌ ಹೈಡ್ರಾ ಫೇಷಿಯಲ್‌ ಟ್ರೀಟ್‌ಮೆಂಟ್‌ಗಳು ಹೇರ್ & ವಿಶ್ರಾಂತಿ: ಲಕ್ಸುರಿಯಸ್ ಹೇರ್‌ ವಾಶ್‌ ಹಾಗೂ ಹೆಡ್ ಮಸಾಜ್ NAASH ಸಂಸ್ಥಾಪಕರ ಹೇಳಿಕೆ NAASH ಸಂಸ್ಥಾಪಕರಾದ ವಿಕ್ರಮ್ ಮತ್ತು ವಿವಾನ್ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. “NAASH, ನಮ್ಮ ಪರಿಪೂರ್ಣತೆಯ ಪೈಪೋಟಿ ಮತ್ತು ಗ್ರಾಹಕರಿಗೆ ಎಲ್ಲಾ ಸೌಂದರ್ಯ ಸೇವೆಗಳು ಒಂದೇ ಜಾ...

ಸದ್ಯದಲ್ಲೇ ತೆರೆಗೆ ಬರಲಿದೆ ದೇವರಾಜ್ ಕುಮಾರ್ ನಿರ್ದೇಶನ, ನಿರ್ಮಾಣ ಹಾಗೂ ನಟನೆಯ "ಆಯುಧ"..

ಸದ್ಯದಲ್ಲೇ ತೆರೆಗೆ ಬರಲಿದೆ ದೇವರಾಜ್ ಕುಮಾರ್ ನಿರ್ದೇಶನ, ನಿರ್ಮಾಣ ಹಾಗೂ ನಟನೆಯ "ಆಯುಧ".. ದೇವರಾಜ್ ಕುಮಾರ್ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ " ಆಯುಧ " ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ಇದೇ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿದೆ.   ದೇವರಾಜ್ ಕುಮಾರ್ ಅವರು ಸದ್ದಿಲ್ಲದೆ ಚಿತ್ರಿಕರಣ ಮುಗಿಸಿ ದೇವರಾಜ್ ಪಿಚ್ಚರ್ ಸ್ಟುಡಿಯೋ ಬ್ಯಾನರ್ ನಲ್ಲೇ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವ ದೇವರಾಜ್ ಕುಮಾರ್ ನಾಯಕ ನಟನಾಗಿಯೂ ಕೂಡ ಕಾಣಿಸಿಕೊಂಡಿದ್ದಾರೆ.  ಹೊನ್ನಾವರ ಬೈಂದೂರು, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ನಾಲ್ಕು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿರುವ ಈ ಚಿತ್ರ ಆಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಡ್ರಾಮಾ ಚಿತ್ರವಾಗಿರುತ್ತದೆ. ಡೇಂಜರ್ ಜೋನ್, ನಿಶಬ್ದ 2, ಅನುಷ್ಕಾ,  ತಾಜ್ ಮಹಲ್ 2 ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ್ ಕುಮಾರ್, ತಮ್ಮ ಐದನೇ ಚಿತ್ರವಾಗಿ  "ಆಯುಧ" ಚಿತ್ರ ಚಿತ್ರವನ್ನು ನಿರ್ದೇಶಿಸಿದ್ದಾರೆ.   ದೇವರಾಜ್ ಕುಮಾರ್ ಅವರಿಗೆ ನಾಯಕಿಯರಾಗಿ   ಅಮೃತ ಹಾಗೂ ಸಂಹಿತ ವಿನ್ಯ ನಟಿಸಿದ್ದಾರೆ. ಖಳ ನಟ ...

"ದಿಲ್ಮಾರ್'ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್..

"ದಿಲ್ಮಾರ್'ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್.. ಕೆಜಿಎಫ್ ನಿರ್ದೇಶಕರ ಚೊಚ್ಚಲ ಇದು.. ದಿಲ್ಮಾರ್ ಸಿನಿಮಾದ ಮೊದಲ ಹಾಡು ಅನಾವರಣ.. ಸಾಥ್ ಕೊಟ್ಟ ಶ್ರೀಮುರಳಿ.. ಕೆಜಿಎಫ್‌ ಸಿನಿಮಾದ ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ದಿಲ್ಮಾರ್ ತೆರೆಗೆ ಬರಲು ಸಜ್ಜಾಗಿದೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ದಿಲ್ಮಾರ್ ಚಿತ್ರದ ನೀನಿಲ್ಲದೇ ಎಂಬ ಪ್ಯಾಥೋ ಗೀತೆಯನ್ನು ಅನಾವರಣ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಶ್ರೀಮುರಳಿ ಮಾತನಾಡಿ, ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಒಳ್ಳೆದಾಗುವ ವಿಷಯಗಳು ಕೆಲವೊಮ್ಮೆ ತಡ ಆಗುತ್ತವೆ. ಕಷ್ಟ ಕೊಡುತ್ತವೆ. ಆ ಬಗ್ಗೆ ಯೋಚನೆ ಮಾಡಬೇಡಿ. ಚಂದ್ರಮೌಳಿ ಮೇಲೆ ಒಂದು ಕಣ್ಣಿತ್ತು. ನೀವೆಲ್ಲಾ ಟ್ಯಾಲೆಂಟ್‌ ಡೈರೆಕ್ಟರ್, ರೈಟರ್. ನೀವು ಜಾಸ್ತಿ ಸಿನಿಮಾ ಮಾಡಿದರೆ ನಮಗೆ ಒಳ್ಳೊಳ್ಳೆ ಸಿನಿಮಾ ಬರುತ್ತದೆ. ನೀವು ತಡ ಮಾಡಬಾರದು. ರಾಮ್ ಚಿತ್ರದಲ್ಲಿ ಪಾತ್ರವಾಗಿ ಕಾಣಿಸುತ್ತಾರೆ. ಹೀರೋ ಆಕ್ಟಿಂಗ್ ಚೆನ್ನಾಗಿದೆ. ಡೈರೆಕ್ಟರ್ ಗೆ ಒಳ್ಳೆ ಟೆಸ್ಟ್ ಇರುವುದು ಕಾಣಿಸುತ್ತದೆ. ಸಾಧನೆ ಸುಲಭ ಅಲ್ಲ. ಬರುತ್ತದೆ. ಸಿಗುತ್ತದೆ. ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ಯಾರಿಂದಲೂ ಅದನ್ನು ಕಿತ್ತುಕೊಳ್ಳಲು ಆಗಿಲ್ಲ. ಅದು ನಿಮಗೆ ಈ ಸಿನಿಮ...

ಸೆಪ್ಟೆಂಬರ್ 29 ರಂದು ರೆಬೆಲ್‌ ಸ್ಟಾರ್‌ ಪ್ರಭಾಸ್‌ ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್‌; 'ದಿ ರಾಜಾಸಾಬ್' ಟ್ರೈಲರ್ ಬಿಡುಗಡೆಗೆ ಸಿದ್ಧ..

ಸೆಪ್ಟೆಂಬರ್ 29 ರಂದು ರೆಬೆಲ್‌ ಸ್ಟಾರ್‌ ಪ್ರಭಾಸ್‌ ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್‌; 'ದಿ ರಾಜಾಸಾಬ್' ಟ್ರೈಲರ್ ಬಿಡುಗಡೆಗೆ ಸಿದ್ಧ.. ರೆಬೆಲ್ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಹಾರರ್-ಫ್ಯಾಂಟಸಿ ಡ್ರಾಮಾ 'ದಿ ರಾಜಾಸಾಬ್' ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ನಿರೀಕ್ಷೆಯೂ ದುಪ್ಪಟ್ಟಾಗಿದೆ. ಕಳೆದ ವರ್ಷ, ಚಿತ್ರತಂಡವು ಪ್ಯಾನ್-ಇಂಡಿಯಾ ಝಲಕ್ ಮೂಲಕ ಕುತೂಹಲ ಕೆರಳಿಸಿತ್ತು. ಅದಾದ ಮೇಲೆ ಇದೇ ಜೂನ್‌ನಲ್ಲಿ ಟೀಸರ್ ಬಿಡುಗಡೆಯಾಗಿ ಕೌತುಕಕ್ಕೆ ಒಗ್ಗರಣೆ ಹಾಕಿತ್ತು. ಆ ಟೀಸರ್‌ನಲ್ಲಿ ಹಲವು ಶೇಡ್‌ಗಳಲ್ಲಿ ಪ್ರಭಾಸ್ ಕಾಣಿಸಿಕೊಂಡು, ಅಚ್ಚರಿ ಮೂಡಿಸಿದ್ದರು. ಇದೀಗ ಇದೇ ರಾಜಾಸಾಬ್‌ ಸಿನಿಮಾದಿಂದ ಮತ್ತೊಂದು ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ.   ಹೌದು, ಮಾರುತಿ ನಿರ್ದೇಶನದ ಬಹುನಿರೀಕ್ಷಿತ 'ದಿ ರಾಜಾಸಾಬ್' ಸಿನಿಮಾದ ಟ್ರೈಲರ್ ಇದೇ ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದೆ. ಆದರೆ, ಇಲ್ಲೊಂದು ಟ್ವಿಸ್ಟ್‌ ಇದೆ. ʼದಿ ರಾಜಾಸಾಬ್‌ʼ ಸಿನಿಮಾದ ಟ್ರೇಲರ್‌ ಮೊದಲಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಲಿದೆ. ಇದಾದ ಮೇಲೆ ಅಂತಿಮವಾಗಿ ಈ ಟ್ರೇಲರ್‌ ಎಲ್ಲೆಡೆ ಯಾವಾಗ, ಯಾವ ದಿನದಂದು ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಈ ಮಹೋನ್ನತ ಪ್ರಾಜೆಕ್ಟ್‌ಗೆ ಟಿ...

ಸಿಂಪಲ್ ಸುನಿ‌ ನಿರ್ದೇಶನದ ಗತವೈಭವ ಬಿಡುಗಡೆಗೆ ರೆಡಿ..ನ.14ಕ್ಕೆ‌ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆ ಎಂಟ್ರಿ..

ಸಿಂಪಲ್ ಸುನಿ‌ ನಿರ್ದೇಶನದ ಗತವೈಭವ ಬಿಡುಗಡೆಗೆ ರೆಡಿ.. ನ.14ಕ್ಕೆ‌ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆ ಎಂಟ್ರಿ.. ನವೆಂಬರ್ 14ಕ್ಕೆ ಬೆಳ್ಳಿತೆರೆಯಲ್ಲಿ ಸಿಂಪಲ್ ಸುನಿ 'ಗತವೈಭವ'.. ದುಶ್ಯಂತ್-ಆಶಿಕಾ ರಂಗನಾಥ್ ನಟನೆಯ ಗತವೈಭವ ನವೆಂಬರ್ 14ಕ್ಕೆ‌ ರಿಲೀಸ್.. ಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭವ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 14ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಯುವ ಪ್ರತಿಭೆ ದುಶ್ಯಂತ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಗತವೈಭವ ಟೀಸರ್ ಅನಾವರಣ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ನಡೆಸಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗತವೈಭವ ಸಿನಿಮಾದ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಗತವೈಭವ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಪ್ರಾಜೆಕ್ಟ್.‌ ನನ್ನ ಬ್ಯಾನರ್‌ನಡಿ ಮಾಡಬೇಕು ಎಂದುಕೊಂಡ ಸಿನಿಮಾ ಇದು. ದುಶ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು. ಅದಕ್ಕೆ ಇದು ಆಗಿದೆ. ನಾಲ್ಕು ಸಿನಿಮಾ ಮಾಡಿದಷ್ಟು ಈ ಜರ್ನಿ ಆಗಿದೆ. ಅಂದುಕೊಂಡ ರೀತಿ ಗತವೈಭವ ಮೂಡಿ ಬಂದಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ರಿಲೀಸ್ ಆದರೆ ಪ್ರಚಾರವಾಗುತ್ತವೆ. ನಾನು ಆಡಿಯನ್ಸ್ ರೀತಿ ಈ‌ ಸಿನಿಮಾಗಾಗಿ ಕಾಯುತ್ತಿದ್ದೇವೆ. ಪ್ರತಿ ಶಾರ್ಟ್ ತ...

ಹೊಂದಿಸಿ ಬರೆಯಿರಿ ನಿರ್ದೇಶಕರ ಹೊಸ ಸಾಹಸ 'ತೀರ್ಥರೂಪ ತಂದೆಯವರಿಗೆ' ಸಿನಿಮಾದ ಮೊದಲ ಹಾಡು ರಿಲೀಸ್..

ಹೊಂದಿಸಿ ಬರೆಯಿರಿ ನಿರ್ದೇಶಕರ ಹೊಸ ಸಾಹಸ 'ತೀರ್ಥರೂಪ ತಂದೆಯವರಿಗೆ' ಸಿನಿಮಾದ ಮೊದಲ ಹಾಡು ರಿಲೀಸ್.. 'ತೀರ್ಥರೂಪ ತಂದೆಯವರಿಗೆ' ಸಿನಿಮಾದ ಭಾವನಾತ್ಮಕ ಹಾಡು ರಿಲೀಸ್.. ಹೊಂದಿಸಿ ಬರೆಯಿರಿ ಸಿನಿಮಾ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ ಅವರ ಹೊಸ ಪ್ರಯತ್ನ ತೀರ್ಥರೂಪ ತಂದೆಯವರಿಗೆ. ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನನದೇ ಜಗದಲಿ ಎಂಬ ಹಾಡಿಗೆ ರಾಮೇನಹಳ್ಳಿ ಜಗನ್ನಾಥ್ ಅರ್ಥಪೂರ್ಣ ಪದಗಳನ್ನು ಪೊಣಿಸಿದ್ದಾರೆ. ಭಾವನಾತ್ಮಕವಾಗಿ ಸಾಗುವ ಗೀತೆ ನೋಡುಗರನ್ನು ಕಾಡುತ್ತದೆ. ಸುಂದರ ದೃಶ್ಯಗಳ ಜೊತೆಯಲ್ಲಿ ಕಾಡುವ ಸಾಹಿತ್ಯ ಹಾಗೂ ಜೋ‌ ಕೋಸ್ಟ ಸಂಗೀತವಿರುವ ನನದೇ ಜಗದಲಿ ಸಾಂಗ್ ಗೆ ಕಪಿಲ್ ಕಪಿಲನ್ ಧ್ವನಿಯಾಗಿದ್ದಾರೆ. ತೀರ್ಥರೂಪ ತಂದೆಯವರಿಗೆ ಎಂಬ ಶೀರ್ಷಿಕೆ ಇದ್ದರೂ ಕೂಡ ಇಲ್ಲಿ ಅಮ್ಮ ಮಗನ ಬಾಂಧವ್ಯ ಅನಾವರಣಗೊಳಿಸುವ ಮೂಲಕ ನಿರ್ದೇಶಕರು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದಾರೆ.  ತೆಲುಗಿನ ಕಿರುತೆರೆಯಲ್ಲಿ ಹೆಸರು ಮಾಡಿರುವ ಕನ್ನಡದ ಹುಡುಗ ನಿಹಾರ್ ಮುಕೇಶ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ ಸಾಥ್ ಕೊಡುತ್ತಿದ್ದಾರೆ. ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ತಾರಾಬಳಗದ ಜೊತೆ‌ ಹೊಸ‌ ಪ್ರತಿಭೆಗಳಿಗೆ ಜಗನ್ನಾಥ್ ಅವರು ಅವಕಾಶ ನೀಡಿದ್ದಾರೆ. ...

"ಫ್ರಾಡ್‍ ಋಷಿ" ಬಗ್ಗೆ ನಮ್‍ ಋಷಿ ಮಾತು..ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಿ ಹಾರೈಸಿದ ನಿರ್ಮಾಪಕ ಕೆ.ಮಂಜು..

"ಫ್ರಾಡ್‍ ಋಷಿ" ಬಗ್ಗೆ ನಮ್‍ ಋಷಿ ಮಾತು.. ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಿ ಹಾರೈಸಿದ ನಿರ್ಮಾಪಕ ಕೆ.ಮಂಜು.. 'ಒಳಿತು ಮಾಡು ಮನುಸ" ಹಾಡಿನ ಖ್ಯಾತಿಯ ನಮ್ ಋಷಿ, ನಿರ್ಮಾಣ, ನಿರ್ದೇಶನ ಹಾಗೂ ನಟನೆ "ಫ್ರಾಡ್ ಋಷಿ" ಚಿತ್ರದ ಎರಡನೇ ಹಾಡು "ಇವನೇ ಇವನೇ ಫ್ರಾಡು ಋಷಿ" ಇತ್ತೀಚೆಗೆ ಬಿಡುಗಡೆಯಾಗಿದೆ. ನಮ್ ಋಷಿ ಬರೆದು ಶ್ರೀಗುರು ಸಂಗೀತ ನೀಡಿರುವ ಹಾಗೂ ಸೋಮಶೇಖರ್ ಅವರು ಹಾಡಿರುವ ಈ ಹಾಡನ್ನು ನಿರ್ಮಾಪಕ ಕೆ.ಮಂಜು ಬಿಡುಗಡೆ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಮ್ ಋಷಿ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಸಿನಿಮಾ ಮಾಡುವುದಕ್ಕೆ ದುಡ್ಡು ಬೇಕಾಗಿಲ್ಲ, ಒಳ್ಳೆಯ ತಂಡ ಬೇಕು. ಒಳ್ಳೆಯ ತಂಡವೆಂದರೆ, ಒಬ್ಬರನ್ನೊಬ್ಬರು ಪ್ರೀತಿಸುವಂತಿರಬೇಕು. ಅವರು ಬೆಳೆದರೆ ನಾವು ಖುಷಿಪಡಬೇಕು. ನಾವು ಬೆಳೆದರೆ ಅವರು ಖುಷಿಪಡಬೇಕು. ಸಣ್ಣ ವಿಷಯಗಳಿಗೆ ಕಿತ್ತಾಟಗಳಾಗುತ್ತವೆ. ಅದನ್ನೆಲ್ಲಾ ಮೀರಿದ ಒಂದು ತಂಡವಿರಬೇಕು. ಮಧು, ಸೋಮಶೇಖರ್, ಹರಿಕೃಷ್ಣ, ಮಂಜುನಾಥ್‍ ಮುಂತಾದವರ ಸಹಕಾರದಿಂದ ಈ ಚಿತ್ರ ರೂಪುಗೊಳ್ಳುತ್ತಿದೆ. ನಾನು ಕಲಾವಿದರಿಗೆ ದುಡ್ಡು ಕೊಟ್ಟು ನಟನೆ ಮಾಡಿಸುವುದಿಲ್ಲ. ಕಲಾವಿದರಲ್ಲಿ ಎರಡು ತರಹದ ಕಲಾವಿದರಿರುತ್ತಾರೆ. ಕೆಲವರು ವೃತ್ತಿಪರ ಕಲಾವಿದರು. ಇನ್ನೂ, ಕೆಲವರು ಪ್ಯಾಶನ್‍ಗಾಗಿ ಅಭಿನಯ ಮಾಡುತ್ತಾರೆ. ಅವರಿಗೆ ಹಣದ ಅವಶ್ಯ...