Skip to main content

Posts

Showing posts from April, 2026

ಈ ವಾರ ತೆರೆಗೆ "ಕ್ಯಾಲೆಂಡರ್"..

ಈ ವಾರ ತೆರೆಗೆ "ಕ್ಯಾಲೆಂಡರ್".. ಈ ಹಿಂದೆ "ಸ್ವಾರ್ಥ ರತ್ನ" ಸೇರಿದಂತೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ "ಕ್ಯಾಲೆಂಡರ್" ಚಿತ್ರ ಈ ವಾರ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಹಿಳಾ ಪ್ರಧಾನ ಈ ಚಿತ್ರ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನಪ್ರಿಯವಾಗಿದೆ.  ಆದರ್ಶ ಗುಂಡುರಾಜ್ ಅವರೆ ನಿರ್ಮಿಸಿ ನಾಯಕನಾಗೂ ನಟಿಸಿರುವ ಈ ಚಿತ್ರದ ನಾಯಕಿಯರಾಗಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಟಿಸಿದ್ದಾರೆ.ಕನಸಿನ ರಾಣಿ ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ರಮೇಶ್ ಕೊಯಿರಾ ಛಾಯಾಗ್ರಹಣ, ಕೆ.ಜಿ.ಎಫ್ ಖ್ಯಾತಿಯ ವಿಕ್ರಂ ಮೋರ್ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಮಹಾಂತೇಶ್ ಆರ್ ಅವರ ಸಹ ನಿರ್ದೇಶನವಿರುವ ಈ ಚಿತ್ರವನ್ನು ನವೀನ್ ಶಕ್ತಿ ನಿರ್ದೇಶಿಸಿದ್ದಾರೆ.

ಟ್ರೇಲರ್ ನಲ್ಲೇ ಗಮನ ಸೆಳೆದ "ಎಲ್ರ ಕಾಲೆಳಿಯತ್ತೆ ಕಾಲ'....

ಟ್ರೇಲರ್ ನಲ್ಲೇ ಗಮನ ಸೆಳೆದ "ಎಲ್ರ ಕಾಲೆಳಿಯತ್ತೆ ಕಾಲ'.... ಚಂದನ್ ಶೆಟ್ಟಿ ಅಭಿನಯದ ಹಾಗೂ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರ ಏಪ್ರಿಲ್ 17 ರಂದು ಬಿಡುಗಡೆ...  ಸುಜಯ್ ಶಾಸ್ತ್ರಿ ನಿರ್ದೇಶನದ, ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ಅವರು ನಿರ್ಮಿಸಿರುವ ಹಾಗೂ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ "ಎಲ್ರ ಕಾಲೆಳಿಯತ್ತೆ ಕಾಲ" ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. 90 ರ ಕಾಲಘಟ್ಟದ ರೆಟ್ರೊ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಗೆ ಚಂದನ್ ಶೆಟ್ಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಏಪ್ರಿಲ್ 17 ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ‌. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೇಳಿದ್ದು ಹೀಗೆ.   ಮೊದಲಿಗೆ ಕೇಳಿದನ್ನೆಲ್ಲಾ ಕೊಟ್ಟು ಒಂದೊಳ್ಳೆ ಚಿತ್ರ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದು ಮಾತನಾಡಿದ ನಿರ್ದೇಶಕ ಸುಜಯ್ ಶಾಸ್ತ್ರಿ, ರಿಯಾಲಿಟಿ ಶೋ ವೊಂದರಲ್ಲಿ ಚಂದನ್ ಶೆಟ್ಟಿ ಅವರನ್ನು ನೋಡಿದ ನನಗೆ ನಮ್ಮ ಕಥೆಗೆ ಇವರು ಸೂಕ್ತ ನಾಯಕ ಎಂದೆನಿಸಿತು. ನಂತರ ಚಂದನ್ ಶೆಟ್ಟಿ ಅವರಿಗೆ ನನ್ನ ಗೆಳೆಯ ರಾಜಗುರು ಹೊಸಕೋಟೆ ಬರೆದಿರುವ ಈ ಚಿತ್ರದ ಕಥೆ ಹೇಳಿದ್ದೆವು. ಚಂದನ್ ಅಭಿನಯಿಸಲು ಒಪ್ಪಿದರು. ಚಿತ್ರೀಕರಣಕ್ಕೂ ಮುನ್ನ ...

5 ಭಾಷೆಯಲ್ಲಿ ಬರ್ತಿದೆ ಜಂಗಲ್ ಬೂಗಿ ರಿಯಾಲಿಟಿ ಶೋ..

5 ಭಾಷೆಯಲ್ಲಿ ಬರ್ತಿದೆ ಜಂಗಲ್ ಬೂಗಿ ರಿಯಾಲಿಟಿ ಶೋ.. 60 ದಿನ ಕಾಡಿನಲ್ಲಿ ಪಯಣ..ಗೆದ್ರೆ ಸಿಗುತ್ತೇ 80 ಲಕ್ಷ ಹಣ.. ಜಂಗಲ್ ಬೂಗಿ..ಇದು ಹೊಸ ರಿಯಾಲಿಟಿ ಶೋ.. ಎಲ್ಲಿ? ಯಾವಾಗಿನಿಂದ ಪ್ರಸಾರ..?.. EIPK ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣದಡಿ‌ ಬರ್ತಿದೆ ಜಂಗಲ್ ಬೂಗಿ ರಿಯಾಲಿಟಿ ಶೋ.. ಜಂಗಲ್ ಬೂಗಿ..ಇದು ಹೊಸ ರಿಯಾಲಿಟಿ ಶೋ.. ಟೈಟಲ್ ಹೇಳುವಂತೆ ಕಾಡಿನಲ್ಲಿ ನಡೆಯುವ ಶೋ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ. ಒಂದು ಟೀಂನಲ್ಲಿ 12 ಜನ ಭಾಗಿಯಾಗಲಿದ್ದು, ಇವರು ಕಾಡಿನಲ್ಲಿ 60 ದಿನ ಕಳೆಯಬೇಕು.  ಈ ವಿಭಿನ್ನ ಬಗೆಯ ರಿಯಾಲಿಟಿ ಶೋ EIPK ಪ್ರೊಡಕ್ಷನ್ ಹೌಸ್ ನಡಿ ವಿನೋದ್ ಪಾರ್ಥ ಸಾರಥಿ ನಿರ್ಮಾಣ ಮಾಡುತ್ತಿದ್ದಾರೆ. ಯಶೋಧರ ವಿಕ್ರಮ್ ಈ ಶೋನ ಸಾರಥಿ ಅಂದರೆ ನಿರ್ದೇಶಕರು. ಪಾಲ್ಸ್ ನಾಗ ಹಾಗೂ ಸಂದೀಪ್ ತೀರ್ಥಹಳ್ಳಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಾಥ್ ಕೊಡುತ್ತಿದ್ದಾರೆ. ಆಡಿ ನಾಗಾರ್ಜುನ್ ಕ್ಯಾಮೆರಾ ಹಿಡಿಯಲಿದ್ದಾರೆ. ಎಲ್ಲಿ ಯಾವಾಗ ಶೋ ಪ್ರಸಾರ?.. ಜಂಗಲ್ ಬೂಗಿ ರಿಯಾಲಿಟಿ ಶೋನ್ನ zeeಕನ್ನಡ ಪ್ರಸಾರ ಮಾಡಲಿದೆ. ಇದೇ ತಿಂಗಳ 15ರಿಂದ ಆಡಿಷನ್ ಶುರುವಾಗಲಿದ್ದು, ಮೇ ಕೊನೆಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಜೂನ್ 10 ರಿಂದ zeeನಲ್ಲಿ ಶೋ ಪ್ರಸಾರವಾಗಲಿದೆ. ಯಾರು ಭಾಗಿಯಾಗಬಹುದು?.. ಜಂಗಲ್ ಬೂಗಿ ರಿಯಾಲಿಟಿ ಶೋನಲ್ಲಿ ಸಾಮ...

‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಬಿಡುಗಡೆ; 22ರ ಹರೆಯದ ನಿರ್ದೇಶಕಿಯ ಅಪೂರ್ವ ಪ್ರಯತ್ನ...

‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಬಿಡುಗಡೆ; 22ರ ಹರೆಯದ ನಿರ್ದೇಶಕಿಯ ಅಪೂರ್ವ ಪ್ರಯತ್ನ... https://youtu.be/4ce1vBiTL6E?si=iIXu1D2RGuQOnGth ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಬಹುನಿರೀಕ್ಷಿತ ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ. ಕೇವಲ 22 ವರ್ಷದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಅಲ್ಝೈಮರ್ಸ್ ಅಥವಾ ಮರೆಗುಳಿತನ ಎಂಬ ಗಂಭೀರ ವಿಷಯವನ್ನು ಅತ್ಯಂತ ಮೃದುವಾಗಿ ಮತ್ತು ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆ. ಮರೆಗುಳಿತನದ ಕಥಾಹಂದರ.. ಸಾಮಾನ್ಯವಾಗಿ ಅಲ್ಝೈಮರ್ಸ್ ಬಗ್ಗೆ ಸಮಾಜದಲ್ಲಿ ಚರ್ಚೆಗಳಾಗುತ್ತವೆ, ಆದರೆ ಆ ಕಾಯಿಲೆಗೆ ತುತ್ತಾದವರ ಮತ್ತು ಅವರನ್ನು ಹಗಲಿರುಳು ಆರೈಕೆ ಮಾಡುವವರ ಒಳಗಿನ ತಳಮಳವನ್ನು ಈ ಚಿತ್ರದಲ್ಲಿ ಅತ್ಯಂತ ನೈಜವಾಗಿ ಚಿತ್ರಿಸಲಾಗಿದೆ. ಈ ಟೀಸರ್ ಪ್ರೇಕ್ಷಕರಿಗೆ ಕೇವಲ ದೃಶ್ಯಗಳನ್ನು ತೋರಿಸುವುದಲ್ಲದೆ, ಕಳೆದುಹೋಗುತ್ತಿರುವ ನೆನಪುಗಳ ನೋವನ್ನು ಮೌನವಾಗಿ ಅನುಭವಿಸುವಂತೆ ಮಾಡುತ್ತದೆ. ಇದು ಕೇವಲ ಸಿನಿಮಾವಲ್ಲ, ಒಂದು ಭಾವನಾತ್ಮಕ ಪಯಣ ಎಂಬ ಭರವಸೆಯನ್ನು ನೀಡುತ್ತದೆ. ಚಿತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯಾ ಅವರು ಮರೆಗುಳಿತನದಿಂದ ತನ್ನ ಅಸ್ತಿತ್ವವನ್ನೇ ಮರೆಯುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರೆ, ಅವರಿಗೆ ಆಸರೆಯ...

ಮೊದಲ ಹಾಡಿನಲ್ಲಿ ಮೋಡಿ ಮಾಡಿದ "ಪಿಚ್ಚರ್"..

ಮೊದಲ ಹಾಡಿನಲ್ಲಿ ಮೋಡಿ ಮಾಡಿದ "ಪಿಚ್ಚರ್".. ಶಿಲ್ಪಾ ಗಣೇಶ್ ನಿರ್ಮಾಣ ಹಾಗೂ ಸಂದೀಪ ಬೆದ್ರ ನಿರ್ದೇಶನದ ಈ ಚಿತ್ರಕ್ಕೆ ನಿತ್ಯಪ್ರಕಾಶ್ ಬಂಟ್ವಾಳ ನಾಯಕ..  ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ನಿರ್ಮಿಸಿರುವ, ಸಂದೀಪ ಬೆದ್ರ ಚೊಚ್ಚಲ ನಿರ್ದೇಶನದ ಹಾಗೂ ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ನಟಿಸಿರುವ ಚಿತ್ರ "ಪಿಚ್ಚರ್". ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲೂ ನಿರ್ಮಾಣವಾಗಿರುವ ಈ ಚಿತ್ರದ ಮೊದಲ ಹಾಡು ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕನ್ನಡದಲ್ಲಿ ಈ ಹಾಡನ್ನು ಚೇತನ್ ಕುಮಾರ್ ಬರೆದರೆ, ತುಳುವಿನಲ್ಲಿ ಅನೂಪ್ ಭಂಡಾರಿ ಬರೆದಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಸ್ಯಾಮುಯೆಲ್‌ ಅಭಿ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈಗ ಮೊದಲ ಹಾಡು ಬಿಡುಗಡೆಯಾಗಿದೆ. ಉಳಿದ ಹಾಡುಗಳು ಸದ್ಯದಲ್ಲೇ ಅನಾವರಣವಾಗಿದೆ.   ಕೌಟುಂಬಿಕ, ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮನೋರಂಜನೆಯೇ ಪ್ರಧಾನ. ಕಳೆದ ಹದಿನೈದು ವರ್ಷಗಳ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿತ್ತಿರುವ ಸಂದೀಪ್ ಬೆದ್ರ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಮಂಗಳೂರು, ಬಂಟ್ವಾಳ, ಕಾಶ್ಮೀರ ಮುಂತಾದ...

ಬೆಂಗಳೂರಿನಲ್ಲಿ ನಡೆದ ಸಿರಿ ವುಮನ್ ಅಚೀವರ್ಸ್ ಅವಾರ್ಡ್ 2026 ಕಾರ್ಯಕ್ರಮ

ಬೆಂಗಳೂರಿನಲ್ಲಿ ನಡೆದ ಸಿರಿ ವುಮನ್ ಅಚೀವರ್ಸ್ ಅವಾರ್ಡ್ 2026 ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಇದೇ ಸಮಾರಂಭದಲ್ಲಿ ಹಲವು ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ತೋರಿದ ಮತ್ತು ವಾಲಿಬಾಲ್ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದಿರುವ ಶ್ರೀಮತಿ ಭಾರತಿ ಪರಮೇಶ್ವರ್,ಅವರಿಗೆ "ಸಿರಿ ಕರ್ನಾಟಕ ಕೀರ್ತಿ ಪ್ರಶಸ್ತಿ"ನೀಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಮತಾ ದಯಾನಂದ್, ಶ್ರೀಮತಿ ಮಮತಾ ದೇವರಾಜ್, ಪದ್ಮಶ್ರೀ ಜೋಗತಿ ಮಂಜಮ್ಮ, ಭುವನ ಸುಂದರಿ ಭವ್ಯ ಗೌಡ, ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ಕಿರು ಮತ್ತು ಹಿರಿತೆರೆಯ ನಟಿ ಅಂಕಿತ ಜಯರಾಮ್ ಮತ್ತು ನಟಿ ರೂಪಿಕ ಇವರೆಲ್ಲರ ಸಹಭಾಗಿತ್ವದಲ್ಲಿ ಅನೇಕ ಗಣ್ಯ ಮಾನ್ಯ ಮಹಿಳೆಯರ ಅಪಾರ ಪರಿಶ್ರಮ ಮತ್ತು ಸಮರ್ಪಣೆಯಿಂದ ಕರ್ನಾಟಕದ ಹೆಮ್ಮೆಯನ್ನೂ, ಭಾರತದ ಕೀರ್ತಿಯನ್ನೂ ದುಪ್ಪಟ್ಟು ಮಾಡಿರುವ ಮಹಿಳಾ ರತ್ನಾ ಮಣಿಗಳನ್ನು ಗುರುತಿಸಿ, ಗೌರವ ಪ್ರಶಸ್ತಿಯನ್ನು ನೀಡಲಾಯಿತು.

ಪೀಟರ್ ಏಪ್ರಿಲ್ 10ರಿಂದ ರಾಜ್ಯದಾದ್ಯಂತ ಬಿಡುಗಡೆ..

ಪೀಟರ್ ಏಪ್ರಿಲ್ 10ರಿಂದ ರಾಜ್ಯದಾದ್ಯಂತ ಬಿಡುಗಡೆ.. ಕೆ.ವಿ.ಎನ್ ಪ್ರೊಡಕ್ಷನ್ಸ್ ವಿತರಣೆಯಲ್ಲಿ ಪೀಟರ್ ರಿಲೀಸ್... ಲವ್ ಮಾಕ್ಟೇಲ್ ಬೆನ್ನಿಗೆ ಮತ್ತೊಂದು ಬ್ಯೂಟಿಫುಲ್ ಕಂಟೆಂಟ್ ಪೀಟರ್... ಸ್ಯಾಂಡ್ ವುಡ್ ನಲ್ಲಿ ಏಪ್ರಿಲ್ಗೆ ಭರವಸೆಯ ಸಿನಿಮಾ ಪೀಟರ್... ಪೀಟರ್.... ಸ್ಯಾಂಡಲ್ ವುಡ್ ಅಂಗಳದಲ್ಲಿ ಈ ಬಿರುಬೇಸಿಗೆಯಲ್ಲಿ ಕನ್ನಡ ಪ್ರೇಕ್ಷಕರ ಕಣ್ಮನಕ್ಕೆ ತಂಪೆರೆಯಲು ಬರ್ತಿರೋ ಮ್ಯೂಸಿಕಲ್ ಲವ್ ಮಿಸ್ಟರಿ. ಈಗಾಗ್ಲೇ ಮೂರು ವಿಶಿಷ್ಠ ಹಾಡುಗಳಿಂದ ಗಮನ ಸೆಳೆದಿರೋ ಪೀಟರ್, ಟೀಸರ್ ನಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷವಾದ ಕುತೂಹಲವನ್ನ ಮೂಡಿಸಿದೆ. ನಿನ್ನೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಾಡುಗಳ ಬಿಡುಗಡೆ ಹಾಗೂ ಪ್ರೀ ರಿಲೀಸ್ ಕಾರ್ಯಕ್ರಮ ಜರುಗಿತು. ಈ ವೇಳೆ ಇಡೀ ತಂಡ ಹಾಜರಾಗಿತ್ತು.‌ ಈ ಸಂದರ್ಭದಲ್ಲಿ ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, ಪೀಟರ್ ಸಿನಿಮಾದ ಪ್ರತಿ ಹಂತದಲ್ಲಿ, ಪ್ರತಿ ಕಂಟೆಂಟ್ ನಲ್ಲಿಯೂ ನಾವು ಹೊಸತನ ಕೊಟ್ಟಿದ್ದೇವೆ. ನೋಡುಗರು ಥಿಯೇಟರ್ ನಲ್ಲಿ ಕೂತು ಮಡಿಕೇರಿಯ ಭಾಗಮಂಡಲದಲ್ಲಿ ನಡೆಯೋ ರೋಚಕ ಕಥೆಯನ್ನು ಅನುಭವಿಸಲೇಬೇಕು. ಅದಕ್ಕೆ ತಕ್ಕಂತೆ ಕಥೆ ಹೆಣೆದಿದ್ದು, ಶಬ್ಧ ವಿನ್ಯಾಸ, ಪರಿಸರ ಇದೆಲ್ಲದರಿಂದ ಪ್ರೇಕ್ಷಕ ಹೊಸ ಅನುಭವೆ ಪಡೆಯುವುದು ಗ್ಯಾರೆಂಟಿ. ಮ್ಯೂಸಿಕ್ ಅಂತಾ ಬಂದಾಗ ನಾಲ್ಕು ಜಾನರ್ ನಲ್ಲಿ ಮ್ಯೂಸಿಕ್ ಮಾಡಿದ್ದೇವೆ. ಪೀಟರ್ ಸಿನಿಮಾದ ಪ್ರತಿ ಕಂಟೆಂಟ್, ಹಾಡು, ಟೀಸರ್ ಎಲ್ಲವೂ ಕೂಡ ...

ಇದು ಸಿಡಿದಿದ್ದ ಹೆಣ್ಣಿನ ಕಥೆ ‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆ..

ಇದು ಸಿಡಿದಿದ್ದ ಹೆಣ್ಣಿನ ಕಥೆ ‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆ.. ನವೀನ್‍ ಮಹದೇವ ಮೊದಲ ಬಾರಿಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ‘ಮೃತ್ಯುದೇವತೆ’ ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ. ಅದಕ್ಕೂ ಮೊದಲು ಗುರುವಾರ ಸಂಜೆ ಉತ್ಸವ್‍ ಲೆಗಸಿ ಸಭಾಂಗಣದಲ್ಲಿ ಚಿತ್ರದ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳಲ್ಲದೆ ಟ್ರೇಲರ್ ಸಹ ಬಿಡುಗಡೆಯಾಯಿತು. ಮಾಜಿ ಕೌನ್ಸಿಲರ್ ಮತ್ತು ಉದ್ಯಮಿ ಕೆ. ರಮೇಶ್‍ ಟ್ರೇಲರ್ ಬಿಡುಗಡೆ ಮಾಡಿದರೆ, ಉದ್ಯಮಿ ಹಾಗೂ ಸಮಾಜಸೇವಕರಾದ ಶ್ರೀನಿವಾಸ್‍ ಅವರು ‘ಮಹಾದೇವ’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿರುವ ಹಿರಿಯ ನಟಿ ವಿನಯಾ ಪ್ರಸಾದ್‍, ‘ಕಾಳಿ’ ಹಾಡಿನ ಮೇಕಿಂಗ್‍ ವೀಡಿಯೋ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನವೀನ್‍ ಮಹಾದೇವ್‍, ‘ಇದಕ್ಕೂ ಮೊದಲು ಕಿರುಚಿತ್ರ ಮಾಡಿದ್ದೆ. ಅದರ ಬಿಡುಗಡೆಗೂ ಮೊದಲೇ ‘ಮೃತ್ಯುದೇವತೆ’ ಚಿತ್ರಕ್ಕೆ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಹೆಣ್ಮಕ್ಕಳು ಅದೆಷ್ಟೇ ಬುದ್ಧಿವಂತರಾದರೂ, ಎಷ್ಟೋ ಓದಿಕೊಂಡಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ಯಾವುದೋ ಬಲೆಗೆ ಬೀಳುತ್ತಾರೆ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ‘ಕುಡಿತ, ದುಡ್ಡು,...

"NH 66" ನಲ್ಲಿ ಪ್ರಮೋದ್ ಶೆಟ್ಟಿ ಪ್ರಯಾಣ‌..

"NH 66" ನಲ್ಲಿ ಪ್ರಮೋದ್ ಶೆಟ್ಟಿ ಪ್ರಯಾಣ‌..  ಮಂಜುನಾಥ್ ಟಿ.ಆರ್ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಶೃತಿ ಹರಿಹರನ್..  ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಹಾಗೂ ಶೀರ್ಷಿಕೆ ಅನಾವರಣ ಸಮಾರಂಭ ರಾಜರಾಜೇಶ್ವರಿ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ನೆರವೇರಿತು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ "NH 66" ಎಂದು ಹೆಸರಿಡಲಾಗಿದೆ. ನಟ ಉಗ್ರಂ ಮಂಜು ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು‌.   ನಾನು ಹಿರಿಯ ನಿರ್ದೇಶಕ ಭಾರ್ಗವ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೆ. ನಂತರ ಕಾರಣಾಂತರದಿಂದ ವಿದೇಶಕ್ಕೆ ತೆರಳಿದೆ. ಅಲ್ಲಿಯೇ ಸ್ಕ್ರಿಪ್ಟ್ ರಚನೆ , ಚಿತ್ರಕಥೆ ಬಗ್ಗೆ ವಿಶೇಷ ಅಧ್ಯಯನ ನಡಿಸಿದೆ. ಈಗ ಇಲ್ಲಿಗೆ ಬಂದು ನನ್ನ ಮೊದಲ ನಿರ್ದೇಶನದ ಚಿತ್ರವನ್ನು ಆರಂಭಿಸಿದ್ದೇನೆ. ರಾಯರ ಪರಮಭಕ್ತನಾದ ನಾನು ಅವರ ಹೆಸರಿನಲ್ಲಿಯೇ ರಾಯ ಫಿಲಂಸ್ ಎಂಬ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದೇನೆ. "NH 66" ಹೆಸರೆ ಹೇಳುವಂತೆ ಒಂದು ರೋಡ್ ಸ್ಟೋರಿ....

'ಲೂಪ್' ಟ್ರೈಲರ್ ಕಿಕ್..!

'ಲೂಪ್' ಟ್ರೈಲರ್ ಕಿಕ್..!  ಕಾಲ ಬದಲಾದಂತೆ ಆಟ ಆಡುವ ವೈಖರಿ ಬದಲಾಗುತ್ತಿದೆಯೇ ವರೆತು ಆಟ ಆಡುವವನ ಮನಸ್ಥಿತಿ ಎಂದಿಗೂ ಬದಲಾಗಿಲ್ಲ ಎಂಬ ಸಂದೇಶವನ್ನಿಟ್ಟುಕೊಂಡೇ 'ಲೂಪ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ..! ಲವ್ ಮತ್ತು ಸಸ್ಪೆನ್ಸ್ ಅಂಶಗಳನ್ನ ಹೊಂದಿರೋ 'ಲೂಪ್' ಸಿನಿಮಾ ಒಂದು ಆಟದ ಸುತ್ತ ಸುತ್ತುತ್ತಾ ಕುತೂಹಲಕಾರಿ ಕ್ಲೈಮ್ಯಾಕ್ಸ್ ನೀಡುತ್ತಂತೆ. ಸ್ಟಾಪ್ ಬೆಟ್ಟಿಂಗ್ಸ್, ನೋ ಡ್ರಗ್ಸ್ ಎನ್ನುವ ಸಂದೇಶವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಬೆಂಗಳೂರಿನ ಮಲ್ಲೇಶ್ವರಂ ರೇಣುಕಾಂಬ ಸ್ಟುಡಿಯೋದಲ್ಲಿ 'ಲೂಪ್' ಚಿತ್ರದ ಟ್ರೈಲರ್ ಲಾಂಚ್ ನೆರವೇರಿದ್ದು, ಒಳ್ಳೆ ಹುಡುಗ ಪ್ರಥಮ್ ಬಂದು ವಿಶ್ ಮಾಡಿದ್ರು. ಚಿತ್ರಕ್ಕೆ ಯಶವಂತ ಆಕ್ಷನ್-ಕಟ್ ಹೇಳಿದ್ದು, ಎಸ್.ಕೆ.ಎಲ್ಲಪ್ಪ ಹಾಗೂ ಯುವಿ ಪ್ರಮೋಷನ್ ಉಮೇಶ್ K N ಬಂಡವಾಳ ಹೂಡಿದ್ದಾರೆ. ಶಶಿಕಿರಣ್ ಗೆ ಶೋಭಿತ ಜೋಡಿಯಾಗಿದ್ದು ಮಿಮಿಕ್ರಿ ಗೋಪಿ, ಅಪ್ಪುರಾಜ್, ಅಭಿ ಸಾಮ್ರಾಟ್, ಮಂಜುಳಾ ಅರಸ್, ಗಣೇಶ್, ಜೀವನ್ ಗೌಡ ಕೂಡ ನಟಿಸಿದ್ದಾರೆ. ಜೀವನ್ ಗೌಡ ಸಿನಿಮಾಟೋಗ್ರಾಫಿ, ಸಂತೋಷ್ ಜೋಶ್ವ ಮ್ಯೂಸಿಕ್ ಮತ್ತು ಅನಿಲ್ ಆಚಾರ್ ಸಂಕಲನ 'ಲೂಪ್' ಆಟದ ಓಟ ಹೆಚ್ಚಿಸುತ್ತಂತೆ. ಪ್ರಚಾರದ ಕೆಲಸಗಳ ಹೊಣೆಯನ್ನ ಶ್ರೀಧರ್ ವಹಿಸಿಕೊಂಡಿದ್ದು, ಸದ್ಯದಲ್ಲೇ 'ಲೂಪ್' ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾ...

ಟ್ರೇಲರ್ ನಲ್ಲೇ ಮೋಡಿ ಮಾಡಿದ ‘ಟೆರರ್’ ಏಪ್ರಿಲ್ 10ರಂದು ತೆರೆಗೆ..

ಟ್ರೇಲರ್ ನಲ್ಲೇ ಮೋಡಿ ಮಾಡಿದ ‘ಟೆರರ್’ ಏಪ್ರಿಲ್ 10ರಂದು ತೆರೆಗೆ..  ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರ ಸಮ್ಮುಖದಲ್ಲಿ ಟ್ರೇಲರ್ ಅನಾವರಣ..  ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ಅವರ ನಿರ್ಮಾಣದ, ರಂಜನ್ ಶಿವರಾಮ್ ಗೌಡ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ "ಟೆರರ್" ಚಿತ್ರ ಆರಂಭದಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಹಾಡುಗಳು ಹಾಗೂ ಟೀಸರ್ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು, ಹಿರಿಯ ಕಲಾವಿದರಾದ ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಸುಂದರರಾಜ್, ಪ್ರಮೀಳಾ ಜೋಷಾಯ್, ಡಿಂಗ್ರಿ ನಾಗರಾಜ್, ಲಹರಿ ವೇಲು ಹಾಗೂ ಬ್ರಹ್ಮಾಂಡ ಗುರೂಜಿ "ಟೆರರ್" ಚಿತ್ರದ ಟ್ರೇಲರ್ ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಮ್ಮ ಚಿತ್ರ ಆರಂಭವಾದ ದಿನದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಾಯಕ ಆದಿತ್ಯ, ಚಿತ್ರ ಉತ್ತಮವಾಗಿ ಮೂಡಿಬರಲು ಇಡೀ ಚಿತ್ರತಂಡ ಕಾರಣ. ವಿಶೇಷವಾಗಿ ಇಂತಹ ಸಂದರ್ಭದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರಿಗೆ ವಿಶೇಷ ಧನ್ಯವಾದ. ಇನ್ನೂ ನಿರ್ದೇಶಕ ರಂಜನ್ ಅವರು ಮೊದಲ ನಿರ್ದೇಶನದಲ್ಲೇ ಒಂದೊಳ್ಳೆ ಕಥೆ ಮಾಡಿಕೊಂಡಿ...

ನಮೀತ್‌ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ರಾಮಾಯಣ” ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌..

ನಮೀತ್‌ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ರಾಮಾಯಣ” ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌.. ಮರ್ಯಾದಾ ಪುರುಷೋತ್ತಮ “ರಾಮ”ನ ಅವತಾರದಲ್ಲಿ ರಣಬೀರ್‌ ಕಪೂರ್.. ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಎರಡು ಭಾಗಗಳ ಸಿನಿಮೀಯ ಸರಣಿ 'ರಾಮಾಯಣ' ತನ್ನ ಮಹತ್ವದ ಅಧ್ಯಾಯವನ್ನು ತೆರೆದಿದೆ. ಈ ಮಹಾಕಾವ್ಯದ ಫಸ್ಟ್‌ ಲುಕ್‌ನಲ್ಲಿ ರಣಬೀರ್ ಕಪೂರ್ ಅವರು 'ರಾಮ'ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾದ 'ರಾಮಾಯಣ' ಚಿತ್ರದ ಮೊದಲ ಟೀಸರ್, 5,000 ವರ್ಷಗಳಿಂದಲೂ ಜನಮಾನಸದಲ್ಲಿರುವ ಅದ್ಭುತ ವ್ಯಕ್ತಿತ್ವವನ್ನು ಕೇಂದ್ರೀಕರಿಸಿದೆ. ಈ ಕಥೆಯೊಂದಿಗೆ ಬೆಳೆದವರಿಗೆ ಇದು ಹೊಸ ದೃಷ್ಟಿಕೋನವನ್ನು ನೀಡಿದರೆ, ಇತರರಿಗೆ ಈ ಬೃಹತ್ ಮಹಾಕಥೆಯನ್ನು ಮೊದಲ ಬಾರಿಗೆ ಅನುಭವಿಸುವ ಅವಕಾಶವನ್ನು ಕಲ್ಪಿಸಿದೆ. ರಾಮ ಅಂತಹ ಒಬ್ಬ ನಾಯಕ, ಇಂದಿನ ಜಗತ್ತಿನಲ್ಲಿ ಅತಿ ಅಪರೂಪ. ಆತ ಆಸೆಗಿಂತ ಕರ್ತವ್ಯವನ್ನೇ ಆರಿಸಿಕೊಂಡವನು. ಸರಿ ಎನಿಸಿದ್ದಕ್ಕಾಗಿ ಅಧಿಕಾರವನ್ನೇ ತ್ಯಜಿಸಿದವನು. ತನಗೆ ಎಲ್ಲವೂ ನಷ್ಟವಾಗುತ್ತದೆ ಎಂದರೂ ಸರಿ...